ಕಾರವಾರ:  ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ವಂದೂರು ಗ್ರಾಮದಲ್ಲಿ ಜನರಿಗೆ ಸಾಕಷ್ಟು ಕಿರುಕುಳ ನೀಡಿ ಆತಂಕ ಸೃಷ್ಟಿಸಿದ್ದ ಕಪ್ಪು ಚಿರಿತೆಯನ್ನು ಹಿಡಿಯುವಲ್ಲಿಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ʼಲಿಂಗಾಯತ ಸಿಎಂʼ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ : ಸಿಎಂ ಸ್ಪಷ್ಟನೆ


ಈ ಹಿಂದೆ ಹೊನ್ನಾವರ ಹಲವಾರು ಗ್ರಾಮಗಳಲ್ಲಿ ಚಿರತೆ ದಾಳಿ ನಡೆಸಿತ್ತು, ಅಷ್ಟೇ ಅಲ್ಲದೆ ತಾಲೂಕಿನ ಜಡಿಗದ್ದೆ ಹಾಗೂ ವಂದೂರ್ ಭಾಗಗಳಲ್ಲಿ ಚಿರತೆ ದಾಳಿಯ ವರದಿಗಳು ಆಗಾಗ ಕೇಳಿ ಬರುತ್ತಿದ್ದವು. ಅದರಲ್ಲೂ ಚಿರತೆ ದಾಳಿಗೆ ಜಾನುವಾರಗಳು ಬಲಿಯಾಗುವ ವಿಚಾರವಾಗಿ ಗ್ರಾಮಸ್ಥರು ಚಿಂತಾಕ್ರಾಂತರಾಗಿದ್ದರು.


ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಅರಣ್ಯ ಇಲಾಖೆ ಈ ಚಿರತೆಯನ್ನು ಹಿಡಿಯಲು ಈ ಭಾಗಗಳಲ್ಲಿ ಬೋನುಗಳನ್ನು ಇಟ್ಟಿತ್ತು, ಚಿರತೆಯ ಚಲನವಲನಗಳ ಮೇಲೆ  ಕಣ್ಡುಣಿಡುವುದರ ಜೊತೆಗೆ ಪ್ರತಿದಿನ ಬೋನಿನ ಒಂದು ಪ್ರತ್ಯೇಕ ಭಾಗದಲ್ಲಿ ನಾಯಿಯೊಂದನ್ನು ಕಟ್ಟಿ ಹಾಕಿ ಚಿರತೆ ಬೋನಿಗೆ ಬಿಳುವಂತೆ ಪ್ಲಾನ್ ಮಾಡಿದ್ದರು.ಈಗ ಅಂತಿಮವಾಗಿ ಕಾರ್ಯಾಚರಣೆ ಯಶಸ್ವಿಯಾಗಿದೆ,ಈ ಸುದ್ದಿ ತಿಳಿದ ತಕ್ಷಣ  ಜನರು ತಂಡೋಪತಂಡವಾಗಿ ಬಂದು ಕಪ್ಪು ಚಿರತೆಯನ್ನು ವೀಕ್ಷಿಸಿದರು.ಈಗ ಇದನ್ನು ದಟ್ಟ ಅರಣ್ಯ ಪ್ರದೇಶದಲ್ಲಿ ಬಿಡಲು ಅರಣ್ಯ ಇಲಾಖೆ ಮುಂದಾಗಿದೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.