ವಿದ್ಯಾರ್ಥಿಯೊಬ್ಬ ಹೋಂ ವರ್ಕ್‌ ಮಾಡಿಲ್ಲ ಅಂತ ಕೋಪಗೊಂಡ ಶಿಕ್ಷಕ ಆತನನ್ನು ಮನಬಂದಂತೆ ಥಳಿಸಿ ಕಿವಿಯಲ್ಲಿ ರಕ್ತ ಬರೋವಂತೆ ಹೊಡೆದು ಚಿತ್ರಹಿಂಸೆ ನೀಡಿದ್ದಾನೆ. ಈ ಘಟನೆ ನಡೆದಿರೋದು ಕೊಪ್ಪಳ ಜಿಲ್ಲೆಯ ಧನ್ವಂತರಿ ಕಾಲೋನಿಯಲ್ಲಿ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ದಿನ ಡೇಟಿಂಗ್‌ಗೆ ಹೋಗೋದನ್ನ ನಿಲ್ಲಿಸಿದ್ದೇ ತಡ, ಜೋಡಿ ಖರೀದಿಸಿದ್ರು ಅದ್ಧೂರಿ ಮನೆ!


ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕನನ್ನು ಲೋಹಿತ್‌ ಎಂದು ಗುರುತಿಸಲಾಗಿದೆ. ಈತ ಇಲ್ಲಿನ ನವೋದಯ ಸೈನಿಕ್‌ ಶಾಲೆಯಲ್ಲಿ ಕೋಚಿಂಗ್‌ ಕ್ಲಾಸ್‌ ನಡೆಸುತ್ತಿದ್ದ. ಈ ಸಂದರ್ಭದಲ್ಲಿ ಹೋಂ ವರ್ಕ್‌ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದ. ಆದರೆ ವಿದ್ಯಾರ್ಥಿ 10 ವರ್ಷದ ಪ್ರಥಮ್‌ ಎಂಬ ಬಾಲಕ ಹೋಂ ವರ್ಕ್‌ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಲೋಹಿತ್‌ ಮನಬಂದಂತೆ ಹೊಡೆದಿದ್ದಾನೆ. ಪರಿಣಾಮ ಕಿವಿಯಲ್ಲಿ ರಕ್ತಬಂದಿದೆ. 


ಸದ್ಯ ವಿದ್ಯಾರ್ಥಿ ಪ್ರಥಮ್‌ಗೆ ಚಿಕಿತ್ಸೆ ನೀಡಲಾಗಿದೆ. ಶಿಕ್ಷಕನ ಕ್ರೂರ ಕೃತ್ಯದಿಂದ ಬಾಲಕ ಪ್ರಥಮ್‌ ನೋವು ಅನುಭವಿಸುತ್ತಿದ್ದಾನೆ. ಈ ಘಟನೆ ಮಾತ್ರವಲ್ಲದೆ, ತರಗತಿಗೆ ಬರುವ ಹಲವಾರು ವಿದ್ಯಾರ್ಥಿಗಳ ಮೇಲೆ ಲೋಹಿತ್‌ ಇದೇ ರೀತಿ ಹಲ್ಲೆ ನಡೆಸುತ್ತಾನಂತೆ. 


ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ಹತ್ತಿರುವಾಗ ರೌಡಿ ಶೀಟರ್ ಗಳು ಆ್ಯಕ್ಟೀವ್ : ಬಿಸಿ ಮುಟ್ಟಿಸಿದ ಸಿಸಿಬಿ


ಸದ್ಯ ಶಿಕ್ಷಕ ಲೋಹಿತ್‌ನ ಕ್ರೂರ ಕೃತ್ಯದ ವಿರುದ್ಧ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.