ಧಾರವಾಡ: ನವಲಗುಂದ ತಾಲ್ಲೂಕಿನ ಚಿಲಕವಾಡಾ ಗ್ರಾಮದ ವಾಸಿ ಯಂಕ್ಕಪ್ಪ ಪೂಜಾರರವರು ನವಲಗುಂದದ ಭೀರೇಶ್ವರ ಸಹಕಾರಿ ಪತ್ತಿನ ಸಂಘದಲ್ಲಿ ದಿ:04/01/2021 ರಂದು 1 ಲಕ್ಷ 68 ಸಾವಿರ ಹಾಗೂ 50 ಸಾವಿರರೂ. ಗಳನ್ನು ಒಂದು ವರ್ಷದ ಖಾಯಂ ಠೇವಣಿಗೆ ಇಟ್ಟಿದ್ದರು.ಒಂದು ವರ್ಷದ ಅವಧಿ ಮುಗಿದರೂ ಎದುರುದಾರ ಸಂಘದವರು ದೂರುದಾರರಿ ಗೆ ಠೇವಣಿ ಮತ್ತು ಅದರ ಮೇಲಿನ ಬಡ್ಡಿ ಹಣಕೊಟ್ಟಿರಲಿಲ್ಲ.


COMMERCIAL BREAK
SCROLL TO CONTINUE READING

ಸಾಕಷ್ಟು ಕಾಲಾವಕಾಶ ಕಳೆದರೂ ಎದುರುದಾರ ಸಂಘದವರು ತನಗೆ ಠೇವಣಿ ಮತ್ತು ಬಡ್ಡಿ ಹಣ ಕೊಡುತ್ತಿಲ್ಲವಾದ್ದರಿಂದ ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಸದರಿ ಸಂಘದ ವಿರುದ್ಧಕ್ರಮ ಕೈಗೊಳ್ಳುವಂತೆ ದೂರುದಾರ ಯಂಕ್ಕಪ್ಪ ಧಾರವಾಡ ಜಿಲಾ ಗ್ರಾಹಕರ ಆಯೋಗದ ಮುಂದೆ ದೂರು ಸಲ್ಲಿಸಿದ್ದರು.


ಇದನ್ನೂ ಓದಿ: ಅಭಿಷೇಕ್ ಅಂಬರೀಷ್​ ಅವಿವಾ ಅದ್ದೂರಿ ವಿವಾಹ: ಸಿನಿ ತಾರೆಯರ ಸಮಾಗಮ


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದಸ್ಯರು ಒಂದು ವರ್ಷದ ಅವಧಿಗೆ ಠೇವಣಿ ಹಣ ಸ್ವೀಕರಿಸಿದ ಎದುರುದಾರ ಸಂಘದವರು ಅವಧಿ ಮುಗಿದ ತಕ್ಷಣ ಠೇವಣಿ ಹಣದ ಮೇಲೆ ಬಡ್ಡಿ ಸಮೇತ ಠೇವಣಿದಾರನಿಗೆ ಹಿಂದಿರುಗಿಸುವುದು ಕರ್ತವ್ಯವಾಗಿದೆ. ಆದರೆ ಎದುರುದಾರ ಸಂಘದವರು ಹಲವಾರು ವರ್ಷ ಕಳೆದರೂ ದೂರುದಾರರ ಠೇವಣಿ ಅಥವಾ ಅದರ ಮೇಲಿನ ಬಡ್ಡಿ ಸಂದಾಯ ಮಾಡದೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.


ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ 


ಸದರಿ ಹಣದ ಮೇಲೆ 04/01/2022 ಕ್ಕೆ ನಿಗಧಿಯಾದಂತೆ ಒಟ್ಟು 2 ಲಕ್ಷ 41 ಸಾವಿರ 920 ರೂ. ಮತ್ತು ಠೇವಣಿ ಅವಧಿ ಮುಗಿದಾಗಿನಿಂದ ಹಣ ಸಂದಾಯವಾಗುವವರೆಗೆ ಶೆ8% ರಂತೆ ಬಡ್ಡಿ ಸೇರಿಸಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಹಣ ಸಂದಾಯ ಮಾಡುವಂತೆ ಎದುರುದಾರ ಬ್ಯಾಂಕಿಗೆ ನಿರ್ದೇಶಿಸಿದೆ.ದೂರುದಾರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರ ಸಂಘದವರು 20 ಸಾವಿರರೂ. ಪರಿಹಾರ ಮತ್ತು 10 ಸಾವಿರರೂ. ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.