ಬೆಂಗಳೂರು: ನಗರದಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ (Acid Attack) ನಡೆದಿದೆ. ಮಾ.18 ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಪ್ನಾ ಬುಕ್ ಹೌಸ್ ಸಿಇಓ ನಿಜೇಶ್ ಶಾ ವಿರುದ್ದ ಎಫ್ಐಆರ್ ದಾಖಲು .!


ದೇವಿ ರಂಗಭೂಮಿ ಕಲಾವಿದೆ (Theater artist) ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. ನಂದಿನಿ ಲೇಔಟ್ ನ ಗಣೇಶ ಬ್ಲಾಕ್ ನ ಮನೆಯ ಜಗಲಿಯ ಮೇಲೆ‌ ಮಲಗಿದ್ದ ಆ್ಯಸಿಡ್ ಎರಚಲಾಗಿದೆ. ರಂಗಭೂಮಿಯ ಸಹಕಲಾವಿದರೇ ಈ ಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ. 


ಘಟನೆಯಲ್ಲಿ ಕಲಾವಿದೆ (Artist Devi) ದೇವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂದೆ ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದೇವಿ, ಅನಾರೋಗ್ಯದಿಂದ ಹುದ್ದೆ ತೊರೆದಿದ್ದರು. ಮಾ. 18 ನೇ ತಾರೀಕು ದೇವಿ ಮನೆಯ ಜಗಲಿ ಮೇಲೆ ಮಲಗಿದ್ದ ವೇಳೆ ಆ್ಯಸಿಡ್ ಅಟ್ಯಾಕ್ ನಡೆದಿದೆ.


ಇದನ್ನೂ ಓದಿ: ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಮೋದಿ ಮುಂದೆ ತೆಗೆದುಕೊಂಡು ಹೋಗೋಕೆ ಹೆದರಿಕೆ ಯಾಕೆ?


ಈ ಬಗ್ಗೆ ನಂದಿನಿ ಲೇಔಟ್ ಠಾಣೆಯಲ್ಲಿ (Nandini Layout) ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ರಮೇಶ್, ಸ್ವಾತಿ, ಯೋಗೇಶ್ ರನ್ನ ಪೊಲೀಸರು ಬಂಧಿಸಿದ್ದಾರೆ. ಸ್ವಾತಿ ಆರೋಪಿ ರಮೇಶ್ ಗೆ ಆ್ಯಸಿಡ್ (Acid) ತಂದು ಕೃತ್ಯ ನಡೆಸುವಂತೆ ಪ್ರಚೋದನೆ ನೀಡಿದ್ದರು ಎಂಬುದು ವಿಚಾರಣೆ ವೇಳೆ ಬಯಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.