ಬೆಂಗಳೂರು: ತಮಿಳುನಾಡಿನಿಂದ ಪತ್ರ ಬರೆಸಿಕೊಂಡು ಬಂದರೆ ನಾಡಿದ್ದೇ ಮೇಕೆದಾಟು ಯೋಜನೆ(Mekedatu Project)ಗೆ ಗುದ್ದಲಿ ಪೂಜೆ ನೆರವೇರಿಸುತ್ತೇವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ(Congress Mekedatu Padayatre)ಯನ್ನು ಟೀಕಿಸಿರುವ ಸಿಟಿ ರವಿ, ಮೇಕೆದಾಟು ಯೋಜನೆಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅಡ್ಡಿಯಾಗಿದ್ದಾರೆ. ಮೇಕೆದಾಟು ಯೋಜನೆಗೆ ಸ್ಟಾಲಿನ್ ಅಡ್ಡಿ ಮಾಡುವುದಿಲ್ಲ ಅಂತಾ ಕಾಂಗ್ರೆಸ್ ನವರು ಪತ್ರ ಬರೆಸಿಕೊಂಡು ಬರಲಿ. ನಮ್ಮ ಸಿಎಂ ಸ್ಟಾಲಿನ್(MK Stalin)ರನ್ನೇ ಕರೆಸಿ ಯೋಜನೆಗೆ ಗುದ್ದಲಿ ಪೂಜೆ ಮಾಡಿಸ್ತಾರೆ. ಕಾಂಗ್ರೆಸ್ ನವರಿಗೆ ಲೆಟರ್ ಬರೆಸಿಕೊಂಡು ಬರುವ ತಾಕತ್ ಇದೆಯೇ ಅಂತಾ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಹೆದ್ದಾರಿ ಪಕ್ಕ ಜಲಶಕ್ತಿ ಯೋಜನೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ


ಪಕ್ಷ ಸೇರುವ ವಿಚಾರದಲ್ಲಿ ನಾನು ನಮ್ಮಪ್ಪನ ಮಾತನ್ನೇ ಕೇಳಲಿಲ್ಲ. ನಾನು ಬಿಜೆಪಿ(BJP) ಬಾವುಟ ಕಟ್ಟುವಾಗ ಈ ಪಕ್ಷದಲ್ಲಿ ಯಾರಿದ್ದಾರೆ ಅಂತಾ ನಮ್ಮ ತಂದೆ ನನ್ನನ್ನು ಕೇಳಿದ್ದರು. ನಾನು ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಬಿ.ಎಸ್.ಯಡಿಯೂರಪ್ಪನವರು ಇದ್ದಾರೆಂದು ಹೇಳಿದ್ದೆ. ಅದಕ್ಕೆ ಬಿಜೆಪಿ ಬೇಡ, ಎಚ್.ಡಿ.ದೇವೇಗೌಡ(HD Deve Gowda)ರ ಪಕ್ಷ ಸೇರು ಅಂತಾ ನಮ್ಮಪ್ಪ ಹೇಳಿದ್ದರು. ನಾನು ಜೆಡಿಎಸ್ ಪಕ್ಷ ಸೇರಿದಿದ್ದರೆ ದೊಡ್ಡ ಗೌಡ್ರು, ಸಣ್ಣ ಗೌಡ್ರು ಹಾಗೂ ಮರಿ ಗೌಡರಿಗೆ ಜೈ ಅನ್ಕೊಂಡು ಇರಬೇಕಿತ್ತು. ನಾನು ಅಂದು ನಮ್ಮಪ್ಪನ ಮಾತು ಕೇಳಿದ್ದಿದ್ರೆ 4 ಸಲ MLA, 2 ಸಲ ಮಿನಿಸ್ಟರ್, ಈಗ ಪ್ರಧಾನ ಕಾರ್ಯದರ್ಶಿ‌ ಆಗ್ತಿರ್ಲಿಲ್ಲ ಅಂತಾ ಹೇಳಿದರು.


ಬಿಜೆಪಿ ಕಚೇರಿಯಲ್ಲಿ ದೇವನಹಳ್ಳಿ ಜೆಡಿಎಸ್ ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಬಿಜೆಪಿ ಸೇರ್ಪಡೆಯಾದರು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai), ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಡಾ.ಕೆ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.


ಇದನ್ನೂ ಓದಿ: ಮೇಕೆದಾಟು ಹೋರಾಟದಲ್ಲಿ ರಾಹುಲ್ ಗಾಂಧಿ ಸಾಥ್ ನೀಡುತ್ತಿಲ್ಲವೇಕೆ?: ಬಿಜೆಪಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.