ಬಿಜೆಪಿಯವರು ಪ್ಲ್ಯಾಸ್ಟಿಕ್ ಆಕಳನ್ನು ಪೂಜೆ ಮಾಡುತ್ತಾರೆ: ಶಾಸಕ ವಿನಯ ಕುಲಕರ್ಣಿ

Cattle slaughter Bill: ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಆಗಲಿದೆ. ಜಾತಿ ಹೆಸರನ್ನು ರಾಜಕೀಯ ಮಾಡೋದು ಬೇರೆ. ಗೋ, ಜಾತಿ ಮೇಲೆ ರಾಜಕೀಯ ಮಾಡೋದು ಸರಿಯಲ್ಲ ಎಂದು ಶಾಸಕ ವಿನಯ ಕುಲಕರ್ಣಿ ಆಗ್ರಹಿಸಿದ್ದಾರೆ.
ಬೆಳಗಾವಿ: ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿಚಾರವಾಗಿ ಬಿಜೆಪಿ ವಿರುದ್ಧ ಶಾಸಕ ವಿನಯ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತು ಆಡುತ್ತಾರೆ ಅಷ್ಟೇ. ಅವರು ಪ್ಲ್ಯಾಸ್ಟಿಕ್ ಆಕಳನ್ನು ಪೂಜೆ ಮಾಡುತ್ತಾರೆ’ ಎಂದು ಟೀಕಿಸಿದರು.
‘ನನ್ನ ಡೈರಿಯಲ್ಲಿ 1600 ಹಸುಗಳು ಇವೆ. ನಾನು ದೊಡ್ಡ ಹೈನುಗಾರಿಕೆ ಹೊಂದಿದ್ದೇನೆ. ಅರ್ಧ ಹೋರಿಯನ್ನು ನಾವು ಏನ್ ಮಾಡಲು ಸಾಧ್ಯವಿಲ್ಲ. ಕೃಷಿಯಲ್ಲಿ ಎತ್ತು ಬಳಕೆ ಸಹ ಕಡಿಮೆಯಾಗಿದೆ. ಮೇವು, ಕಾರ್ಮಿಕರ ವೆಚ್ಚ ಹೆಚ್ಚು ಆಗಿದೆ. ಮಾತಾಡಿ ಜನರಿಗೆ ದಾರಿ ತಪ್ಪಿಸುವುದು ಬೇರೆ. ವಾಸ್ತವವಾಗಿ ಅನುಭವಿಸುವುದು ಬೇರೆ’ ಎಂದು ಹೇಳಿದರು.
ಇದನ್ನೂ ಓದಿ: ರಾಯಚೂರು: ವಿದ್ಯುತ್ ಶಾಕ್ ನಿಂದ ಲೈನ್ ಮೆನ್ ಸಾವು, ಗ್ರಾಮಸ್ಥರ ಆಕ್ರೋಶ
ದೇಶಿ ತಳಿ ಉಳಿಸಲು ಸರ್ಕಾರ ಯೋಜನೆ ರೂಪಿಸಲಿ. ಎಫ್ಎಫ್ ತಳಿಯನ್ನು ಇಟ್ಟುಕೊಂಡು ಏನ್ ಮಾಡೋದು? ಯಾರ ಬಳಿಯಾದ್ರು ದುಡ್ಡು ತಂದು ಗೋ ಶಾಲೆ ಮಾಡೊದು ಬೇರೆ. ವಾಸ್ತವವಾಗಿ ಡೈರಿ ಫಾರ್ಮ್ ಮಾಡೋ ಬೇರೆ. ಕೋಟಿ ಕೋಟಿ ಸಾಲ ಮಾಡಿ ಡೈರಿ ನಡೆಸುತ್ತೇವೆ’ ಎಂದು ವಿನಯ ಕುಲಕರ್ಣಿ ಹೇಳಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಆಗಲಿದೆ. ಜಾತಿ ಹೆಸರನ್ನು ರಾಜಕೀಯ ಮಾಡೋದು ಬೇರೆ. ಗೋ, ಜಾತಿ ಮೇಲೆ ರಾಜಕೀಯ ಮಾಡೋದು ಸರಿಯಲ್ಲ. ಸರ್ಕಾರ ರೈತನ್ನು ಕರೆದು ಮಾತನಾಡಲಿ ಎಂದು ಶಾಸಕ ವಿನಯ ಕುಲಕರ್ಣಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Odisha Train Tragedy: ಎರಡು ವಿಮಾನಗಳಲ್ಲಿ 80 ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿಗೆ ಆಗಮನ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.