ಬೆಂಗಳೂರು : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ ಜಯಪ್ರಕಾಶ ಹೆಗ್ಡೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.ವರ್ಚಸ್ಸು ಇರುವ‌ ಬಿಜೆಪಿ  ನಾಯಕರ ಮೇಲೆ ಕಾಂಗ್ರೆಸ್ ಕಣ್ಣು ಇಟ್ಟಿದ್ದು ಮಾಜಿ ಸಂಸಾದರಾದ ಜಯಪ್ರಕಾಶ್ ಹೆಗಡೆ ಅವರನ್ನ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಿದೆ. 


COMMERCIAL BREAK
SCROLL TO CONTINUE READING

ಈ ಮುನ್ನ ಕಾಂಗ್ರೆಸ್ ನಿಂದ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ,ನೆನ್ನೆ ಡಿಸಿಎಂ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ ಜಯಪ್ರಕಾಶ ಹೆಗಡೆ,ಸೌಜನ್ಯ ದ ಬೇಟಿ, ಡಿಸಿಎಂಗೆ ವಿಶ್ ಮಾಡಲು ಬಂದಿದ್ದಾಗಿ ಹೇಳಿದರು. ಅದೇನೇ ಇದ್ದರೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಗೆ ಶಿವಕುಮಾರ್ ಹುಡುಕಾಟ ನಡೆಸುತ್ತಿದ್ದು,ಜಯಪ್ರಕಾಶ ಹೆಗಡೆ ಕಾಂಗ್ರೆಸ್ ಸೇರ್ಪಡೆ ಆಗ್ತಾರ ಎಂಬ ಚರ್ಚೆ ಪ್ರಾರಂಭವಾಗಿದೆ.


ಇದನ್ನೂ ಓದಿ-ಗೃಹ ಜ್ಯೋತಿ ಯೋಜನೆ : ಬಾಡಿಗೆ ದಾರರ ಸ್ಥಿತಿ ಶೋಚನೀಯ: ಆರ್ ಅಶೋಕ್


ಈ ಚರ್ಚೆಗೆ ಜೀ ಕನ್ನಡ ನ್ಯೂಸ್ ಪ್ರತಿನಿಧಿ ಜನಾರ್ಧನ್ ಹೆಬ್ಬಾರ್ ಅವರಿಗೆ ದೂರವಾಣಿ ಮೂಲಕ ಸ್ಪಷ್ಟಿಕರಣ ನೀಡಿದ ಜಯಪ್ರಕಾಶ್ ಹೆಗಡೆ ಅವರು,ಚುನಾವಣಾ ರಾಜಕೀಯಕ್ಕೆ ಈಗ ಬರಲ್ಲ. ಈಗ ಯಾವುದೇ ಪಕ್ಷದಲ್ಲಿ ನಾನಿಲ್ಲ.ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ.ಸರ್ಕಾರ ನನಗೆ ಅನುಮತಿ ನೀಡಿದೆ,ನವೆಂಬರ್ ಅಂತ್ಯದ ವರೆಗೆ ಅಧಿಕಾರಾವಧಿ ಇದೆ.ಆ ಬಳಿಕ ರಾಜಕೀಯದ ಚಿಂತನೆ ಮಾಡುತ್ತೇನೆ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಇತ್ತು, ಆದರೆ ಸದ್ಯ ಯಾವುದೇ ಪಕ್ಷದ ಜೊತೆ ನಾನು ಇಲ್ಲ,ಎಲ್ಲ ಪಕ್ಷದ ಮುಖಂಡರ ಜೊತೆ ಒಳ್ಳೆ ಸಂಬಂಧವಿದೆ, ಎಂದರು.


ಇದನ್ನೂ ಓದಿ-ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ : ಸಾವರ್ಕರ್ ಹಾಗೂ ಹೆಡ್ಗೆವಾರ್ ಪಠ್ಯಕ್ಕೆ ಕೊಕ್?!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.