ಗೃಹ ಜ್ಯೋತಿ ಯೋಜನೆ : ಬಾಡಿಗೆ ದಾರರ ಸ್ಥಿತಿ ಶೋಚನೀಯ: ಆರ್ ಅಶೋಕ್

ಗ್ಯಾರಂಟಿ ಘೋಷಣೆ ಸಂದರ್ಭದಲ್ಲಿ  ಸಿದ್ದರಾಮಯ್ಯ ಅವರು ಮಾತನಾಡುತ್ತಾ, ನನಗೂ ಫ್ರೀ, ನಿಮಗೂ ಫ್ರೀ, ಎಲ್ಲರಿಗೂ ಫ್ರಿ,  ಮಹದೇವಪ್ಪ ನಿನಗೂ ಉಚಿತ ಅಂದಿದ್ರು. ಆದರೆ ಈಗ ತೆರಿಗೆ ಪಾವತಿದಾರರಿಗೆ  ಮಾತ್ರ ಅಂತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ಯಾರಂಟಿಗಳ ಬಗ್ಗೆ ಗೊಂದಲದ ಮೇಲೆ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಪ್ರತಿ ಮಂತ್ರಿಯ ಹೇಳಿಕೆ ಗೊಂದಲ ಗೂಡಾಗಿದೆ, ಎಂದರು.

Written by - Prashobh Devanahalli | Edited by - Yashaswini V | Last Updated : Jun 8, 2023, 12:21 PM IST
  • ಗ್ಯಾರಂಟಿ ಅರ್ಜಿಗಳಲ್ಲಿ ಜಾತಿ ಕಾಲಂ ವಿಚಾರವಾಗಿ ಮಾತನಾಡಿ ಜಾತಿ ಕಾಲಂಗಳನ್ನು ಹಾಕುವ ಮೂಲಕ ಜಿಲೆಬಿ ಬ್ರಾಂಡ್ ಮಾಡ್ತಿದ್ದಾರೆ.
  • ಸಿದ್ದರಾಮಯ್ಯ ಅಂದ್ರೆ ಜಿಲೆಬಿ ಅನ್ನೋ ಬ್ರಾಂಡ್. ಉಚಿತ ವಿದ್ಯುತ್, ‌2000 ರೂ. ಕೊಡೋಕೆ ಜಾತಿ ಬೇಕಾ..?
  • ಕೆಲವು ಜಾತಿಗಳನ್ನ ಈ ಫ್ರೀ ಸ್ಕೀಮ್ ನಿಂದ ಹೊರಗಡೆ ಇಡೋದಕ್ಕೆ ಹುನ್ನಾರ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಆರೋಪ ಮಾಡಿದರು.
ಗೃಹ ಜ್ಯೋತಿ ಯೋಜನೆ : ಬಾಡಿಗೆ ದಾರರ ಸ್ಥಿತಿ  ಶೋಚನೀಯ: ಆರ್ ಅಶೋಕ್ title=

ಬೆಂಗಳೂರು: ವಿದ್ಯುತ್ ಬಿಲ್ ಒಂದು ವರ್ಷದ  ಸರಾಸರಿ ಆಧಾರದ ಮೇಲೆ ಕಟ್ಟಬೇಕು ಅಂತಿದ್ದಾರೆ. ಅಲ್ಲೂ ಮೋಸ ಮಾಡ್ತಿದ್ದಾರೆ. ಬಾಡಿಗೆ ದಾರರ ಸ್ಥಿತಿ ಶೋಚನೀಯವಾಗಿದೆ. ಅವರೆಲ್ಲಾ ಕರೆಂಟ್  ಬಿಲ್ ಓನರ್ ಕಡೆಯಿಂದ ತರಬೇಕಾಗುತ್ತದೆ ಎಂದು ಮಾಜಿ ಸಚಿವ ಆರ್ ಅಶೋಕ್ ಕಿಡಿ ಕಾರಿದರು.

ಬಿಜೆಪಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ "ಗೃಹ ಜ್ಯೋತಿ" ಯೋಜನೆ ಕುರಿತು ಮಾತನಾಡಿದ ಮಾಜಿ ಸಚಿವ ಆರ್ ಅಶೋಕ್,  ಗ್ಯಾರಂಟಿ ಘೋಷಣೆ ಜಾರಿಯಲ್ಲಿ ಕಾಂಗ್ರೆಸ್ ಜನರಿಗೆ ಟೋಪಿ ಹಾಕುತ್ತಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದರು.

ಗ್ಯಾರಂಟಿ ಘೋಷಣೆ ಸಂದರ್ಭದಲ್ಲಿ  ಸಿದ್ದರಾಮಯ್ಯ ಅವರು ಮಾತನಾಡುತ್ತಾ, ನನಗೂ ಫ್ರೀ, ನಿಮಗೂ ಫ್ರೀ, ಎಲ್ಲರಿಗೂ ಫ್ರಿ,  ಮಹದೇವಪ್ಪ ನಿನಗೂ ಉಚಿತ ಅಂದಿದ್ರು. ಆದರೆ ಈಗ ತೆರಿಗೆ ಪಾವತಿದಾರರಿಗೆ ಇದರ ಪ್ರಯೋಜನ ಇಲ್ಲ ಅಂತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ಯಾರಂಟಿಗಳ ಬಗ್ಗೆ ಗೊಂದಲದ ಮೇಲೆ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಪ್ರತಿ ಮಂತ್ರಿಯ ಹೇಳಿಕೆ ಗೊಂದಲ ಗೂಡಾಗಿದೆ, ಎಂದರು.

ಇದನ್ನೂ ಓದಿ- ಸುಳ್ಳು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್‍ನಿಂದ ಕನ್ನಡಿಗರಿಗೆ ವಿಶ್ವಾಸ ದ್ರೋಹ: ಬಿಜೆಪಿ ಆರೋಪ

ಗ್ಯಾರಂಟಿ ಅರ್ಜಿಗಳಲ್ಲಿ ಜಾತಿ ಕಾಲಂ ವಿಚಾರವಾಗಿ ಮಾತನಾಡಿ, ‌ಜಾತಿ ಕಾಲಂಗಳನ್ನು ಹಾಕುವ  ಮೂಲಕ ಜಿಲೆಬಿ ಬ್ರಾಂಡ್ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅಂದ್ರೆ ಜಿಲೆಬಿ ಅನ್ನೋ ಬ್ರಾಂಡ್. ಉಚಿತ ವಿದ್ಯುತ್, ‌2000 ರೂ. ಕೊಡೋಕೆ ಜಾತಿ ಬೇಕಾ..? ಕೆಲವು ಜಾತಿಗಳನ್ನ ಈ  ಫ್ರೀ ಸ್ಕೀಮ್ ನಿಂದ ಹೊರಗಡೆ ಇಡೋದಕ್ಕೆ ಹುನ್ನಾರ ಮಾಡ್ತಿದ್ದಾರೆ ಎಂದು ಆರೋಪ ಮಾಡಿದರು.

ಗ್ಯಾರಂಟಿ ಕಾರ್ಡ್ ನಲ್ಲಿ ಮೊದಲು ಒಂದು ಕಂಡಿಷನ್ ಹಾಕಿರಲಿಲ್ಲ. ವಿದ್ಯುತ್ ಬಿಲ್ ಡಿಪಾಸಿಟ್ ಚಾರ್ಜ್ 65% ಏರಿಕೆ ಮಾಡಿ ಇದರಲ್ಲಿ ಹಣ ಸಂಗ್ರಹ ಮಾಡ್ತಿದ್ದಾರೆ. ವಿದ್ಯುತ್ ದರ 70 ಪೈಸೆ ಏರಿಕೆ ಮಾಡಿದ್ದಾರೆ. ಅತಿ ದುಬಾರಿ ರೇಟ್ ಗಳನ್ನು ಹಾಕ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ- "ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡುತ್ತೇವೆ"

ಜನಗಳ ದುಡ್ಡು ತಗೊಂಡು ಅವರಿಗೆ ವಾಪಸ್ಸು ಫ್ರಿಯಾಗಿ ಕೊಡೋದು,‌ ಇದು ಕಾಂಗ್ರೆಸ್ ಬುದ್ಧಿವಂತಿಕೆ. ಇದನ್ನು  ಮೆಚ್ಚಲೇಬೇಕು ಎಂದು ವ್ಯಂಗ್ಯವಾಗಿ ಟೀಕಿಸಿದರು.

ಇಡೀ ರಾಜ್ಯದ ಜನ ರೊಚ್ಚಿಗೆದ್ದು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ. ಗ್ಯಾರಂಟಿ ಕಾರ್ಡ್  ಘೋಷಣೆ ಭರವಸೆ ಕೊಟ್ಟಂತೆ ನಡೆದುಕೊಳ್ಳಿ, ಇಲ್ಲಾಂದ್ರೆ ಜನ ಕೇಳಿದಾಗ ಚುರುಕು ಮುಟ್ಟುತ್ತದೆ. ನಾವು ಹೋರಾಟ ಮಾಡುತ್ತೇವೆ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News