ರೈತರಿಗೆ ಕಾರವಾದ ಮೆಣಸಿನಕಾಯಿ ಬೆಳೆ.. ಅನ್ನದಾತನ ಗೋಳು ಕೇಳೋರಿಲ್ಲ..!
Chilli Crop: ರಾಜ್ಯದಲ್ಲಿ ಬರಗಾಲಕ್ಕೆ ಅಕ್ಷರಶಃ ಅನ್ನದಾತರೂ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ ಇತ್ತ ಗಿರಿನಾಡು ಯಾದಗಿರಿಯಲ್ಲೂ ಮೆಣಸಿನಕಾಯಿ ಬೆಳೆಗೆ ಟ್ಯಾಂಕರ ಮೂಲಕ ನೀರು ಹರಿಸುವ ಕೆಲಸಕ್ಕೆ ರೈತರು ಮುಂದಾಗಿದ್ದಾರೆ ಈ ಕುರಿತ ಒಂದು ಮಾಹಿತಿ ಇಲ್ಲಿದೆ..
ಸಾಲಾಗಿ ನಿಂತಿರುವ ನೀರಿನ ಟ್ಯಾಂಕರಗಳು ಹುಲುಸಾಗಿ ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆ ಮಳೆಯಿಲ್ಲದೆ ಇರುವದರಿಂದ ಬೆಳೆ ಉಳಿಸಲು ಹರಸಾಹಸ ಪಡುತ್ತಿರುವ ರೈತರು ಇದೆಲ್ಲಾ ದೃಶ್ಯ ಕಂಡುಬಂದಿದ್ದು ಶಹಾಪೂರ ತಾಲೂಕಿನ ಮದ್ರಕಿ ಗ್ರಾಮದಲ್ಲಿ.
ಹೌದು ಈ ಭಾರಿ ಮಳೆ ಇಲ್ಲದೆ ಇರುವದರಿಂದ ನಾರಾಯಣಪೂರ ಜಲಾಶಯದ ಕಾಲುವೆ ನೀರು ನಂಬಿಕೊಂಡು ನಾಟಿ ಮಾಡಿದ ರೈತರು ಮೆಣಸಿನಕಾಯಿ ಬೆಳೆಗೆ ಲಕ್ಷಾಂತರ ರೂ ಖರ್ಚು ಮಾಡಿ ಈಗ ಕಾಲುವೆ ನೀರು ಕೂಡ ಬಂದಾಗಿದ್ದು ಅನಿವಾರ್ಯವಾಗಿ ಟ್ಯಾಂಕರ ಮೂಲಕ ನೀರೊದಗಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ-ರೈತರ ಬದುಕಿಗೆ ಸಿಹಿ ನೀಡಬೇಕಿದ್ದ ಕಬ್ಬು ಕಹಿ..! ಸಚಿವರು ಡೋಂಟ್ಕೇರ್
ಒಂದು ಟ್ಯಾಂಕರ್ ನೀರಿಗೆ 1 ಸಾವಿರದಿಂದ 2 ಸಾವಿರ ಹಣ ನೀಡಿ ನೀರು ತಂದು ಜಮೀನಿಗೆ ಹಾಕುತ್ತಿದ್ದಾರೆ. ಟ್ಯಾಂಕರ ಮೂಲಕ ನೀರೊದಗಿಸದಿದ್ದರೆ ಲಕ್ಷಾಂತರ ಖರ್ಚು ಮಾಡಿದ ಬೆಳೆ ಸಂಪೂರ್ಣ ನಷ್ಟ ಅನುಭವಿಸುವಂತಾಗುತ್ತದೆ.
ಮೆಣಸಿನಕಾಯಿ ಬೆಳೆ ಕಾರಕ್ಕಿಂತ ಮಳೆಯಿಲ್ಲದೆ ರೈತನ ಒಡಲಿಗೆ ಕಾರವಾಗಿ ಪರಿಣಮಿಸಿದೆ ಇದರಿಂದ ಮಾಡು ಇಲ್ಲವೆ ಮಡಿ ಎನ್ನುವ ಸ್ಥಿತಿ ಮೆಣಸಿನಕಾಯಿ ಬೆಳೆದ ರೈತರಿಗೆ ಬಂದಿದೆ.
ಇದನ್ನೂ ಓದಿ-ಪ್ರಧಾನಿ ನರೇಂದ್ರ ಮೋದಿಯವರು ತ್ರಿಬಲ್ ತಲಾಖ್ ನಿಷೇಧಿಸಿದ್ದಾರೆ
ಇದರಿಂದ ಜಿಲ್ಲಾಡಳಿತ ಹಾಗೂ ಸರ್ಕಾರ ರೈತರ ನೆರವಿಗೆ ದಾವಿಸಬೇಕು ನೆರವಿನ ಹಸ್ತ ನೀಡಬೇಕು ಇಲ್ಲದಿದ್ದರೆ ನಾವು ಸಾಲಸೋಲ ಮಾಡಿ ಖರ್ಚು ಮಾಡಿ ಬೆಳೆದ ಬೆಳೆಗೆ ಹೊರೆಯಾಗಿ ಜೀವನಕ್ಕಾಗಿ ಕೃಷಿಯನ್ನೆ ಬೀಡಬೇಕಾಗುತ್ತದೆ ಎಂದು ತಮ್ಮ ಅಸಾಯಕತನವನ್ನು ಜೀ ಕನ್ನಡದೊಂದಿಗೆ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ರೈತರ ಬಾಳಿಗೆ ವರವಾಗಬೇಕಾದ ಮೆಣಸಿನಕಾಯಿ ಬೆಳೆ ಶಾಪವಾಗಿ ರೈತರ ಜೀವ ಹಿಂಡುತ್ತಿದೆ ಕಾಲುವೆಗೆ ನೀರು ಹರಿಸುತ್ತಾರ ಕಾದು ನೋಡಬೇಕಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.