ಬೆಂಗಳೂರು: ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ಬಂದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಯಶವಂತಪುರ ಎಸಿಪಿ ರವಿಶಂಕರ್ ಹಾಗೂ ಸೋಲದೇವನಹಳ್ಳಿ ಇನ್ಸ್ಪೆಕ್ಟರ್ ವೆಂಕಟೇಶ್ ಗೌಡ ಅವರ ಮೇಲೆ ಮನನೊಂದ ಯುವತಿ ಪೊಲೀಸ್ ಆಯುಕ್ತರಿಗೆ ನಾಲ್ಕು ಪುಟಗಳ ದೂರು ನೀಡಿದ್ದಾಳೆ.


COMMERCIAL BREAK
SCROLL TO CONTINUE READING

ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ಬಂದ ಯುವತಿಗೆ  ಕಾಮುಕರು ಮುಟ್ಟಿದ ಅಂಗಾಗ ತೋರಿಸುವಂತೆ ಎಸಿಪಿ ರವಿ ಪ್ರಸಾದ್ ಹೇಳಿದ್ದಾಗಿ, ಎಸಿಪಿ ಹೇಳಿದಕ್ಕೆ ನಗುತ್ತಾ ತೋರಿಸು ಎಂದು ಸೋಲದೇವನಹಳ್ಳಿ ಇನ್ಸ್ಪೆಕ್ಟರ್ ವೆಂಕಟೇಶ್ ಗೌಡ ಸಹಕರಿಸಿದರು ಎಂದು ಯುವಕಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.


ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ ಲೈಂಗಿಕ ದೌರ್ಜನ್ಯದ ಬಗ್ಗೆ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ನೀಡಲು ಹೋದಾಗ ದೂರು ತೆಗೆದುಕೊಳ್ಳಲು ಪೊಲೀಸರು ನಿರಾಕರಿಸಿದ್ದರು. ಈ  ಹಿನ್ನೆಲೆಯಲ್ಲಿ ಡಿಸಿಪಿ ಭೇಟಿ ಮಾಡಿದ್ದ ಯುವತಿಗೆ ಎಸಿಪಿಗೆ ದೂರು ನೀಡುವಂತೆ ಡಿಸಿಪಿ ತಿಳಿಸಿದ್ದರು ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. 


ಒಟ್ಟಿನಲ್ಲಿ ರಕ್ಷಣೆ ನೀಡಬೇಕಾದ ಆರಕ್ಷಕರೆ ಈ ರೀತಿ ನಡೆದುಕೊಂಡಿರುವುದು ಸಮಾಜ ತಲೆತಗ್ಗಿಸುವಂತಹ ಸಂಗತಿ.