ಬೆಂಗಳೂರು: ಮೃತ ಸಂತೋಷ್ ಕಾಂಗ್ರೆಸ್ ಕಾರ್ಯಕರ್ತ ಎಂಬ ಪ್ರಪಾಗಂಡಾ ಸೃಷ್ಟಿಸಿರುವ ಬಿಜೆಪಿ ಲಿಂಗಾಯತ ಸಮುದಾಯದ ಹಿಂದೂ ಕಾರ್ಯಕರ್ತನ ಸಾವಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನೈತಿಕತೆ ಎಂಬ ಪದಕ್ಕೆ ಬಿಜೆಪಿಯಲ್ಲಿ ಅರ್ಥವಿದ್ದಿದ್ದರೆ ಇಂತಹ ಸದಾರಮೆ ನಾಟಕ ಬಿಟ್ಟು ಭ್ರಷ್ಟ, ದೇಶದ್ರೋಹಿ ಕೆ.ಎಸ್.ಈಶ್ವರಪ್ಪನನ್ನು ವಜಾಗೊಳಿಸಿ, ಜೈಲಿಗಟ್ಟಬೇಕಿತ್ತು’ ಅಂತಾ ಟೀಕಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಡಿಕೆ ಶಿವಕುಮಾರ್‌- ಸುರ್ಜೇವಾಲ ಪೊಲೀಸರ ವಶಕ್ಕೆ!


"ಬಸವಣ್ಣನ ಅನುಯಾಯಿಯ ಹತ್ಯೆಯಾಗಿದೆ"


‘ಡಿಯರ್ ಬಿಜೆಪಿ, ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಮೂಲತಃ ಜನತಾ ಪರಿವಾರದ ಕಾರ್ಯಕರ್ತರು. ಕೆ.ಸುಧಾಕರ್, ಮುನಿರತ್ನ ಸೇರಿದಂತೆ ನಿಮ್ಮಲ್ಲಿರುವ 16ಕ್ಕೂ ಹೆಚ್ಚು ಮಂದಿ ಮೂಲತಃ ಕಾಂಗ್ರೆಸ್ ಕಾರ್ಯಕರ್ತರು. ಅವರ ಮೇಲೆ ಕಣ್ಣಿಟ್ಟಿರಿ, ಸ್ವಲ್ಪ ಹುಷಾರಾಗಿರಿ! ಅವರೆಲ್ಲರೂ ಬಿಜೆಪಿಯನ್ನು ಮುಗಿಸುವ ಟೂಲ್ ಕಿಟ್ ಭಾಗವೇ!’ ಎಂದು ಬಿಜೆಪಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.