ಬೆಂಗಳೂರು: ರಾಜ್ಯದಲ್ಲಿ ನಿನ್ನೆ 453 ಜನರಿಗೆ  ಕರೋನವೈರಸ್ (Coronavirus) COVID 19 ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದ COVID 19 ವೈರಸ್ ಪೀಡಿತರ ಸಂಖ್ಯೆ 9,150ಕ್ಕೆ ಏರಿಕೆತಾಗಿದೆ. ಬೆಂಗಳೂರು ನಗರವೊಂದರಲ್ಲೇ 196 , ಬಳ್ಳಾರಿಯಲ್ಲಿ 40, ಕಲಬುರಗಿಯಲ್ಲು 39, ವಿಜಯಪುರದಲ್ಲಿ 39, ಮೈಸೂರು ಜಿಲ್ಲೆಯಲ್ಲಿ 18 ಜನರಲ್ಲಿ ವೈರಸ್ ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಇದಲ್ಲದೆ ರಾಜ್ಯದಲ್ಲಿ ನಿನ್ನೆ  ಕೋವಿಡ್ -19 (Covid-19) ವೈರಸ್ ಪೀಡಿತರ ಪೈಕಿ ಐವರು ಮೃತಪಟ್ಟಿದ್ದಾರೆ.‌ ಅವರೆಂದರೆ ಬೆಂಗಳೂರಲ್ಲಿ ಮೂವರು ಮತ್ತು ಬೀದರ್​ನಲ್ಲಿ ಇಬ್ಬರು. ನಿನ್ನೆ ಒಟ್ಟು 225 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 5,618ಕ್ಕೆ ಏರಿಕೆಯಾಗಿದೆ. ಇನ್ನು 3,391 ಸಕ್ರೀಯ ​ಪ್ರಕರಗಳಿವೆ ಎಂದು​ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.


ಈ 453 ಸೋಂಕು ಪೀಡಿತರ ಪೈಕಿ 69 ಅಂತಾರಾಜ್ಯ ಹಾಗೂ 05 ಅಂತಾರಾಷ್ಟ್ರೀಯ ಪ್ರಯಾಣಿಕರು  ಎಂದು ತಿಳಿದುಬಂದಿದೆ.


ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?


  • ಬೆಂಗಳೂರು ನಗರ-196

  • ಬಳ್ಳಾರಿ-40

  • ಕಲಬುರಗಿ-39

  • ವಿಜಯಪುರ-39

  • ಮೈಸೂರು-18

  • ಗದಗ-18

  • ಧಾರವಾಡ-15

  • ಬಾಗಲಕೋಟೆ-14

  • ಬೀದರ್-13

  • ದಾವಣಗೆರೆ-08

  • ಉತ್ತರ ಕನ್ನಡ-08

  • ಕೋಲಾರ-08

  • ದಕ್ಷಿಣ ಕನ್ನಡ-07

  • ಮಂಡ್ಯ-05

  • ಹಾಸನ-05

  • ತುಮಕೂರು-04

  • ಯಾದಗಿರಿ-03

  • ಚಿಕ್ಕಬಳ್ಳಾಪುರ-03

  • ಹಾವೇರಿ-03

  • ರಾಯಚೂರು-02

  • ಶಿವಮೊಗ್ಗ-02

  • ರಾಮನಗರ-02

  • ಚಿಕ್ಕಮಗಳೂರು -01



ಯಾವಜಿಲ್ಲೆಯಲ್ಲಿ ಎಷ್ಟು ಜನ ಡಿಸ್ಚಾರ್ಜ್?


  • ಬೀದರ್-58

  • ರಾಯಚೂರು-34

  • ದಕ್ಷಿಣ ಕನ್ನಡ-26

  • ಬೆಂಗಳೂರು ನಗರ-17

  • ಯಾದಗಿರಿ -15

  • ಬಳ್ಳಾರಿ-12

  • ಧಾರವಾಡ-12

  • ಕಲಬುರಗಿ-09

  • ವಿಜಯಪುರ-07

  • ಹಾಸನ-07

  • ಉಡುಪಿ-06

  • ಉತ್ತರ ಕನ್ನಡ-06

  • ಬಾಗಲಕೋಟೆ-06

  • ಚಿತ್ರದುರ್ಗ-03

  • ಗದಗ-03

  • ಬೆಳಗಾವಿ-03

  • ಕೊಪ್ಪಳ -01