ಬೆಂಗಳೂರು : ತೌಕ್ತೆ ಚಂಡಮಾರುತವು ಇಂದು ಬೆಳಿಗ್ಗೆಯಿಂದ ಅತ್ಯಂತ ತೀವ್ರ ಸ್ವರೂಪ ತಾಳಿದೆ ಇದು ಮೇ 18 ರ ವರೆಗೆ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ(Karnataka State Disaster Management Authorit), ಕಳೆದ 24 ಗಂಟೆಗಳಲ್ಲಿ 6 ಜಿಲ್ಲೆಗಳು, 3 ಕರಾವಳಿ ಜಿಲ್ಲೆಗಳು ಮತ್ತು 3 ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಭಾರಿ ಮಳೆಯಾಗಿದೆ ಮತ್ತು 4 ಜನರು ಪ್ರಾಣ ಕಳೆದುಕೊಂಡಿದ್ದಾರೆ. 73 ಗ್ರಾಮಗಳಿಗೆ ಹಾನಿ ಉಂಟಾಗಿದೆ ಎಂದು ಕೆಎಸ್‌ಡಿಎಂಎ ತಿಳಿಸಿದೆ.


ಇದನ್ನೂ ಓದಿ : Rainfall Alert : ತೌಕ್ತೆ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ..!


ಐಎಂಡಿ ಪ್ರಕಾರ, ತೌಕ್ತೆ ಚಂಡಮಾರುತ(Cyclone Tauktae)ವು ಪ್ರಸ್ತುತ ಪಂಜಿಮ್-ಗೋವಾದ ಮತ್ತು ನೈರುತ್ಯೆ ಮುಂಬೈಗೆ 490 ಕಿ.ಮೀ, 730 ಕಿ.ಮೀ ಎಸ್‌ಎಸ್‌ವೆಸ್ಟ್ ಆಫ್ ವೆರಾವಲ್ (ಗುಜರಾತ್) ಕೇಂದ್ರೀಕೃತವಾಗಿದೆ ಮತ್ತು ಇದು ಮೇ 18 ರೊಳಗೆ ಗುಜರಾತ್ ಕರಾವಳಿಯನ್ನು ತಲುಪಲಿದೆ. ಚಂಡಮಾರುತದ ದೃಷ್ಟಿಯಿಂದ ಸರ್ಕಾರ ಅನೇಕ ವಿಮಾನಯಾನ ಮತ್ತು ರೈಲುಗಳನ್ನು ರದ್ದುಗೊಳಿಸಿದೆ. ನೌಕಾಪಡೆ, ಐಎಎಫ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳನ್ನು ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಇತರ ಹಲವಾರು ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.


ಇದನ್ನೂ ಓದಿ : Tauktae Cyclone : ತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ರಾಜ್ಯ ಕರಾವಳಿ ಪ್ರದೇಶ..!


ಮುಂಬೈಯಲ್ಲಿ ಭಾನುವಾರ ಮಳೆ(Rain)ಯಾಗುವ ನಿರೀಕ್ಷೆಯಿದೆ. ಐಎಂಡಿ 'ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪಶ್ಚಿಮ ಕೊಂಚನ್ ಮತ್ತು ಪಶ್ಚಿಮ ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.


ಇದನ್ನೂ ಓದಿ : HD Deve Gowda : 'ಈ ಸಂಕಷ್ಟದಲ್ಲಿ ನನ್ನ ಹುಟ್ಟುಹಬ್ಬ ಆಚರಿಸುವುದು ಬೇಡ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.