ಧಾರವಾಡ: ಧಾರವಾಡದ ಪ್ರಸೇಂಟೇಶನ್ ಗಲ್ರ್ಸ ಹೈಸ್ಕೂಲಿನಲ್ಲಿ ಸಹಾಯಕ ಶಿಕ್ಷಕಿಯರಾದ ಭಾರತಿ ಭಾವಿಕಟ್ಟಿ ಮತ್ತು ರೀನಾ.ಆರ್ ದೂರ ಶಿಕ್ಷಣದ ಮೂಲಕ ಕುವೆಂಪು ವಿಶ್ವವಿದ್ಯಾಲಯದಿಂದ ತನ್ನ ಎಮ್.ಎಸ್.ಸಿ. ಪದವಿ ಪಡೆಯಲು ಧಾರವಾಡದ ಕೆ.ಸಿ.ಇ. ಪೌಂಡೇಷನ್ ಸಂಸ್ಥೆಯ ಮೂಲಕ 2021-22ನೇ ಇಸವಿಯಲ್ಲಿ ರೂ.35,400/- ಹಾಗೂ ರೂ.20,000/- ಪ್ರವೇಶ ಶುಲ್ಕ ಕಟ್ಟಿದ್ದರು.


COMMERCIAL BREAK
SCROLL TO CONTINUE READING

ಅದರಂತೆ ಎದುರುದಾರರು ಪದವಿಗೆ ಬೇಕಾದಂತಹ ಎಲ್ಲ ಅಭ್ಯಾಸ ಪತ್ರಿಕೆಗಳನ್ನು ನೀಡುವುದಾಗಿ ಹೇಳಿದ್ದರು. ಆದರೆ ಯಾವುದೇ ಅಭ್ಯಾಸ ಪ್ರತಿಗಳನ್ನು ಕೊಡದೇ ಮತ್ತು ತರಗತಿಗಳನ್ನು ಸಹ ನಡೆಸಿರಲಿಲ.್ಲ ದೂರುದಾರರು ಹಲವು ಬಾರಿ ವಿನಂತಿಸಿದರೂ ಸಹ ತರಗತಿಗಳನ್ನು ನಡಸದೇ, ಪಠ್ಯಕ್ರಮಗಳನ್ನು ಪೂರೈಸದೇ ಸೇವಾ ನ್ಯೂನ್ಯತೆ ಎಸೆಗಿರುತ್ತಾರೆ. ಎದುರುದಾರ ಕೆ.ಸಿ.ಇ ಫೌಂಡೇಶನ್ ಅವರ ಈ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದೂರುದಾರರಿಬ್ಬರೂ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ಇದನ್ನೂ ಓದಿ: ಹರಿಯಾಣಕ್ಕೆ ಸಿಎಂ ಇವರೇ..!, ಜಮ್ಮು ಕಾಶ್ಮೀರದಲ್ಲಿ ವಿಜಯಮಾಲೆ ಧರಿಸಿದ ಕಾಂಗ್ರೆಸ್‌-ಎನ್‌ಸಿ ಜೋಡಿ


ಸದರಿ ದೂರಿನ ಕೂಲಂಕುಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಕೆ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ, ದೂರುದಾರರಿಬ್ಬರಿಂದ ಎದುರುದಾರರು ಶುಲ್ಕ ಪಡೆದು, ತರಗತಿಗಳನ್ನು ನಡೆಸದೇ ಹಾಗೂ ಪಠ್ಯಕ್ರಮಗಳನ್ನು ನೀಡದೇ ಇರುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರಿಬ್ಬರು ಪಾವತಿಸಿದ ಶುಲ್ಕ ರೂ.35,400/- ಮತ್ತು ರೂ.15,000/- ಅದರ ಮೇಲೆ ವಾರ್ಷಿಕ ಶೇ.10% ರಂತೆ ಅವರು ಫೀ ಪಾವತಿಸಿದ ದಿನದಿಂದ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗೆ ಕೊಡುವಂತೆ ಆಯೋಗ ಆದೇಶಿಸಿದೆ.


ಗ್ರಾಹಕರಾದ ವಿದ್ಯಾರ್ಥಿನಿಯರಿಗೆ ಕೆ.ಸಿ.ಇ. ಪೌಂಡೇಷನ್‍ನವರು ತಲಾ ರೂ.50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ಕೊಡಬೇಕು ಅಂತಾ ತೀರ್ಪಿನಲ್ಲಿ ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.