ಚಾಮರಾಜನಗರ: ಹುಲಿ ಹಾಗೂ ಸಿಂಹ ಎರಡೂ ಹೆಸರುಗಳ ಮಿಶ್ರಣದಿಂದ ಲೈಗರ್ ಎಂಬ ಪದ ಹುಟ್ಟಿದ್ದು ನಿಮಗೆ ಗೊತ್ತೇ ಇದೆ. ಅದೇ ರೀತಿ, ಇಲ್ಲೊಂದು ನಾಯಿ ಡೈಗರ್ ಆಗಿದೆ. ಆದರೆ, ಇದ್ಯಾವುದು ಸಿನಿಮಾ ಕಥೆಯಲ್ಲ ರೈತನ ಕತೆ.


COMMERCIAL BREAK
SCROLL TO CONTINUE READING

ಹೌದು..., ಹನೂರು ತಾಲೂಕಿನ  ಅಜ್ಜೀಪುರ ಗ್ರಾಮದಲ್ಲಿ ಹುಲಿ ವೇಷಧಾರಿ ನಾಯಿಯೊಂದು ಓಡಾಡುತ್ತಿದ್ದು ಅನಾಮಿಕ ರೈತನ ಕೈ ಚಳಕ ಎಂದು ತಿಳಿದುಬಂದಿದೆ.  ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಮನುಷ್ಯನ ಗೊಂಬೆ, ಲೌಡ್ ಸ್ಪೀಕರ್, ಜಾಗಟೆ-ಗಂಟೆ, ತೆಂಗಿನ ಮರಗಳಿಗೆ ತಗಡು ಬಡಿಯುವುದನ್ನೆಲ್ಲಾ ಮಾಡಿ  ನೋಡಿದ ರೈತರು ಈಗ ಹುಲಿಯಂತ ನಾಯಿಯನ್ನೇ ಕರೆತಂದಿದ್ದಾರೆ‌. 


ಇದನ್ನೂ ಓದಿ- ಬೀದಿಗಿಳದ ಶೋಷಿತ ಸಮುದಾಯ : ಅವಾಸ್ತವಿಕ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ತಿರಸ್ಕರಾಕ್ಕೆ ಆಗ್ರಹ


ಈ ವಿಲಕ್ಷಣ ಐಡಿಯಾದಿಂದ ವನ್ಯಜೀವಿಗಳು, ಮಂಗಗಳು  ಹೆದರುತ್ತವೆಯೋ ಗೊತ್ತಿಲ್ಲ. ಆದರೆ, ವಾಹನ ಸವಾರರಂತೂ ಬೆಚ್ಚಿ ಬೀಳುತ್ತಿದ್ದಾರೆ. ಅಜ್ಜೀಪುರ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ವೇಳೆ ದುತ್ತನೇ ಎದುರಾಗುವ ಈ ಡೈಗರ್ ಕಂಡು ಹೌಹಾರುತ್ತಿದ್ದಾರೆ‌.


ನಾಯಿಗೆ ಹುಲಿ ರೂಪದ ಬಣ್ಣ ಬಳಿದಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ದಾರಿಹೋಕರು ಹುಲಿ ರೂಪದ ನಾಯಿಯನ್ನು ನೋಡಿ ಭಯ ಬೀಳುವುದರ ಜೊತೆಗೆ ವಿಚಲಿತರಾಗುತ್ತಿದ್ದಾರೆ.  ಇದು ದಿಟವಾದ ವ್ಯಾಘ್ರವಲ್ಲ ಎಂದು ಅರಿಯುತ್ತಿದ್ದಂತೆ ಬದುಕಿದೆಯಾ ಬಡ ಜೀವವೇ  ಎಂಬಂತೆ ನಿಟ್ಟುಸಿರು ಬಿಡುತ್ತಾ ಶಪಿಸುತ್ತಿದ್ದು ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಈ ಗ್ರಾಮದಲ್ಲಿ ಡೈಗರ್ ಹವಾ ಸೃಷ್ಟಿಸಿದೆ.


ಇದನ್ನೂ ಓದಿ- ಮತ ಬೇಕಾದಾಗ ಮನಃಸಾಕ್ಷಿ ಮಾರಿಕೊಳ್ಳುವುದು ಶೋಭೆಯಲ್ಲ: ಕೃಷ್ಣಭೈರೇಗೌಡಗೆ ಎಚ್‍ಡಿಕೆ ತಿರುಗೇಟು


ಇನ್ನು, ಹುಲಿಯಂತ ನಾಯಿ ಕಂಡು ಕೋತಿಗಳು, ಪಕ್ಷಿಗಳು ಓಟ ಕೀಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದ್ದು ಒಂದು ವೇಳೆ ಯಶ ಕಂಡರೇ ರೈತನ ಐಡಿಯಾ ಬೇರೆ ಊರಿಗೂ ಹೋಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.