ಚಾಮರಾಜನಗರ: ನೀತಿಸಂಹಿತೆ ಮುಗಿಯುತ್ತಿದ್ದಂತೆ ಸಚಿವರು ಆಕ್ಟಿವ್ ಆಗಿದ್ದು ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹಾದೇವಪ್ಪ  ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಕೆ.ವೆಂಕಟೇಶ್ (K Venkatesh), ಡಾ.ಎಚ್‌.ಸಿ.ಮಹಾದೇವಪ್ಪ  (Dr HC Mahadevappa) ಚಾಮರಾಜನಗರ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ನಡೆಸುತ್ತಿದ್ದ ವೇಳೆಯೇ ಬೆಳಗ್ಗೆ 10.50 ರ ಹೊತ್ತಿಗೆ ವಿದ್ಯುತ್ ಕೈಕೊಟ್ಟಿದ್ದು, 11.30  ಆದರೂ ಕರೆಂಟ್ ಬಾರದೇ ಕತ್ತಲಲ್ಲೇ ಕೆಡಿಪಿ ಸಭೆ ನಡೆಯಿತು.


ಈ ಅವ್ಯವಸ್ಥೆಯನ್ನು ಕಂಡ ಸಚಿವ ಡಾ‌.ಎಚ್.ಸಿ.ಮಹಾದೇವಪ್ಪ (Minister HC Mahadevappa) ಯಾರೂ ವಿದ್ಯುತ್ ನಿರ್ವಹಣೆ ಮಾಡುವುದು ಎಂದು ಕೇಳಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದ ಬಳಿಕ ಜನರೇಟರ್ ವ್ಯವಸ್ಥೆ ಮಾಡಿ ಎರಡು ಫೋಕಸ್ ಲೈಟ್ ಮೂಲಕ ಬೆಳಕು ಹರಿಸಲಾಯಿತು.


ಇದನ್ನೂ ಓದಿ- ಮಾದಪ್ಪನ ಬೆಟ್ಟದ ತಪ್ಪಲಲ್ಲಿ ನಾಲ್ವರಿಂದ ವಿಷ ಸೇವನೆ


ಅಧಿಕಾರಿಗಳಿಗೆ ತರಾಟೆ: 
ಬಿಳಿಗಿರಿರಂಗನ ಬೆಟ್ಟದ  (Biligiri Ranga Hills) ಗಿರಿಜನರಿಗೆ ನೀರು ಕೊಡುವ ವಿಚಾರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಡಾ.ಎಚ್.ಸಿ.ಮಹಾದೇವಪ್ಪ  ಬಿ‌ಆರ್‌ಟಿ ಡಿಸಿಎಫ್ ದೀಪ್ ಜೆ ಕಂಟ್ರಾಕ್ಟರ್ ವಿರುದ್ಧ ಹರಿಹಾಯ್ದರು.


ನೀರು ಕೊಡಲು ಪೈಪ್ ಲೈನ್ ಗೆ ಅವಕಾಶ ಕೊಡದೇ  ಡಿಸಿಎಫ್ ದೀಪಾ ತಗಾದೆ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಭಾಗದಲ್ಲಿ ಬಹಳ ಹಿಂದಿನಿಂದಲೂ ಕುಡಿಯುವ ನೀರು (Drinking Water) ಸರಬರಾಜು ಆಗುತ್ತಿದೆ. ಆದರೆ ಪೈಪ್ ಸರಿಪಡಿಸುವ ಕೆಲಸಕ್ಕೂ ಬಿಡದೇ ತೊಂದರೆ ಕೊಡುತ್ತಿದ್ದಾರೆ. ನಮ್ಮ ಮಾತು ಸಹ ಕೇಳುತ್ತಿಲ್ಲ ಎಂದು ಡಿಸಿಎಫ್  ವಿರುದ್ಧ ಸಚಿವರ ಎದುರೇ ಶಾಸಕರು ಆಕ್ರೋಶ ಹೊರ ಹಾಕಿದರು. ಬಳಿಕ ಕೆ.ವೆಂಕಟೇಶ್  ಮಧ್ಯ ಪ್ರವೇಶಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸೋಣ ಎಂದರು.


ಇದನ್ನೂ ಓದಿ- ಚುನಾವಣೆಯಲ್ಲಿ ಹಿನ್ನಡೆ, ಕಾಂಗ್ರೆಸ್ ಆತ್ಮಾವಲೋಕನ: ಎಂ ಬಿ ಪಾಟೀಲ


ಇನ್ನೂ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಜಾನುವಾರುಗಳ ಸಾವು  ಹಿನ್ನಲೆ, ಗರಂ ಆದ ಸಚಿವ ಕೆ.ವೆಂಕಟೇಶ್, ಅಧಿಕಾರಿಗಳ ಬೆಜವಾಬ್ದಾರಿಯಿಂದ ಜನ ಜಾನುವಾರುಗಳಿಗೆ ಸಮಸ್ಯೆಯಾಗುತ್ತಿದೆ. ಪ್ಲಾಸ್ಟಿಕ್ ತಿಂದು ಜಾನುವಾರುಗಳ ಸಾವು ಎನ್ನಲಾಗುತ್ತಿದೆ. ಈ ಸಂಬಂಧ ಪಶುಇಲಾಖೆ ಡಿಡಿ ಹನುಮೇಗೌಡ ಅಮಾನತಿಗೆ ಶಿಫಾರಸು ಮಾಡುವಂತೆ ಡಿಸಿಗೆ ಸೂಚನೆ ನೀಡದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.