ಬೆಂಗಳೂರು : ಅದು ದೇವಸ್ಥಾನಗಳಿರುವ ಪವಿತ್ರ ಸ್ಥಳ. ಅದೇ ಜಾಗದಲ್ಲಿ ಮನ ಕುಲವೇ ತಲೆತಗ್ಗಿಸುವ ಘನಘೋರ ಕೃತ್ಯ ನಡೆದು ಹೋಗಿದೆ. ಬೀದಿ ನಾಯಿಗಳಿಗೆ ವಿಷಪ್ರಾಶನ ಮಾಡಿ ಮಾರಣಹೋಮ ಮಾಡಲಾಗಿದೆ. ಕಂಡ ಕಂಡಲ್ಲಿ ಶ್ವಾನಗಳ ಕಳೇಬರ ಸಿಕ್ತಿದ್ದು ನಿಜಕ್ಕೂ ಮನ ಕಲಕುವಂತಿದೆ.


COMMERCIAL BREAK
SCROLL TO CONTINUE READING

ಹೌದು... ರಾಜರಾಜೇಶ್ವರಿ ನಗರದ ಬಿಇಎಂಎಲ್ ಬಡಾವಣೆ. ಎತ್ತರದ ಪ್ರದೇಶದಲ್ಲಿ ಷಣ್ಮುಗ ಮತ್ತು ಕರು ಮಾರಿಯಮ್ಮ ದೇವಸ್ಥಾನಗಳಿದೆ. ಈ ಪವಿತ್ರ ಸ್ಥಳಕ್ಕೆ ದಿನ ನಿತ್ಯ ನೂರಾರು ಭಕ್ತರು ಬಂದು ಹೋಗ್ತಾರೆ. ವಿಶಾಲವಾದ ಜಾಗ ಕೂಡ ಇರೋದ್ರಿಂದ 18 ಕ್ಕೂ ಹೆಚ್ಚು ಶ್ವಾನಗಳು ಇದೇ ಸ್ಥಳದಲ್ಲಿತ್ತು. ಆದ್ರೆ ಎಲ್ಲಾ ನಾಯಿ ಕಳೆದ ಐದು ದಿನಗಳಿಂದ ಕಾಣೆಯಾಗಿದ್ವು. ಜನ ಏನಾಯ್ತು ಅಂತಾ ಯೋಚನೆ ಮಾಡುವಷ್ಟರಲ್ಲಿ ಮೂಗಿಗೆ ಕೆಟ್ಟ ವಾಸನೆ ಬಡಿಯೋಕೆ ಶುರುವಾಗಿತ್ತು. 


ಇದನ್ನೂ ಓದಿ: ವಿ.ಸೋಮಣ್ಣನವರೇ ಸಂತೋಷ ಕೂಟದ ಪ್ರಯತ್ನಕ್ಕೆ ನೀವು 3ನೇ ಬಲಿಪಶು: ಕಾಂಗ್ರೆಸ್


ವಾಸನೆ ಜಾಡು ಹಿಡಿದು ಹೊರಟಾಗ ಭಯಾನಕ ದೃಶ್ಯವೇ ಕಂಡಿದೆ. ಕಾಲು ಕಟ್ಟಿದ ಸ್ಥಿತಿಯಲ್ಲಿ ಕೆಲ ಶ್ವಾನಗಳ ಮೃತದೇಹ ಸಿಕ್ರೆ. ಚೀಲ, ಬ್ಯಾಗ್ ಗಳಲ್ಲಿ ಮತ್ತೆ ಹಲವು ನಾಯಿಯಗಳ ಕಳೇಬರ ಸಿಕ್ಕಿದೆ. ವಿಚಾರ ತಿಳಿದು ಶ್ವಾನ ಪ್ರಿಯರು ಸ್ಥಳಕ್ಕೆ ಆಗಮಿಸಿದ್ರು. ಆರ್.ಆರ್‌‌. ನಗರ ಪೊಲೀಸರಿಗೆ ವಿಚಾರ ತಿಳಿಸಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಒಟ್ಟು ಎಂಟು ನಾಯಿಗಳ ಮೃತದೇಹ ಸಿಕ್ಕಿದೆ.


ಮೇಲ್ನೋಟಕ್ಕೆ ವಿಷಪ್ರಾಶನ ಮಾಡಿ ಕೊಲೆ ಮಾಡಿರೊ ಶಂಕೆ ಇದೆ. ಘಟನೆ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗಿದೆ‌. ಅದೇನೇ ಹೇಳಿ ಮಾನವನ ಅಟ್ಟಹಾಸ ಮಿತಿಮೀರಿದ್ದು, ಮೂಕ ಪ್ರಾಣಿಗಳ ಮೇಲಿನ ಈ ರೀತಿಯ ಪ್ರತಾಪ ನಿಜಕ್ಕೂ ಖಂಡನೀಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ