ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕ್ಷಣ ಗಣನೆಗೆ ಸುರುವಾಗಿದೆ.ಆದ್ದರಿಂದ ಅದಕ್ಕೆ ಪೂರಕವಾದ ಪೂರ್ವಭಾವಿ ಸಿದ್ದತೆಗಳನ್ನು ಚುನಾವಣಾ ಆಯೋಗ ಮಾಡಿಕೊಳ್ಳುತ್ತಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ಚುನಾವಣಾ ಆಯೋಗವು ಚುನಾವಣೆಯನ್ನು ಈ ನಿಟ್ಟಿನಲ್ಲಿ ಮಂಗಳವಾರದಂದು ಅಧಿಕಾರಿಗಳ ಸಭೆಯನ್ನು ಕರೆದಿದೆ. ಸಭೆಯಲ್ಲಿ  ರಾಜ್ಯದ ಎಲ್ಲ ಜಿಲ್ಲೆಗಳ ಎಸ್ಪಿ ಮತ್ತು ಜಿಲ್ಲಾಧಿಕಾರಿಗಳು ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ. ಸಭೆಯ ಸಮಯವಿನ್ನು ನಿಗದಿಯಾಗಿಲ್ಲ ಆದರೆ ಎಲ್ಲ ಅಧಿಕಾರಿಗಳಿಗೆ ಕುದ್ದು ಹಾಜರಿರಲು ಸೂಚನೆ ನೀಡಲಾಗಿದೆ.  


ನಾಳೆ ನಡೆಯಲಿರುವ ಸಭೆಯಲ್ಲಿ  ಕೇಂದ್ರ ಚುನಾವಣಾ ಆಯೋಗದ ಉಪನಿರ್ದೇಶಕರು ಭಾಗವಹಿಸಲಿದ್ದು ಅವರ ಜೊತೆ ಸಭೆಯಲ್ಲಿ  ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಸಹಿತ ಉಪಸ್ಥಿತಿ ಇರುವ ಸಾಧ್ಯತೆ ಇದೆ. ನಂತರ  ಅವರು ಪ್ರತ್ಯೇಕ ಸಭೆಯನ್ನು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಜೊತೆ  ಚುನಾವಣಾ ವಿಚಾರವಾಗಿ ನಡೆಸುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.