ಬೆಂಗಳೂರು: ಬಿಜೆಪಿಯ ಆಪರೇಶನ್ ಭೀತಿಯಿಂದಾಗಿ ಬೆಂಗಳೂರಿನ ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರಲ್ಲಿ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆಗಲಾಟೆ ನಡೆದು ಕೊನೆಗೆ ಗಣೇಶ್ ಅವರು ಶಾಸಕ ಆನಂದ್ ಸಿಂಗ್ ಅವರ  ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.



COMMERCIAL BREAK
SCROLL TO CONTINUE READING

ಆದರೆ ಇದನ್ನು ಸಚಿವ ಡಿಕೆ.ಶಿವಕುಮಾರ್ ತಳ್ಳಿಹಾಕಿ "ಇದು ಸಾಧ್ಯವಿಲ್ಲ ,ನೀವು ಅವರು ಜೊತೆಯಾಗಿ ಹೋಗುವುದನ್ನು ಬರುವುದನ್ನು ನೋಡಿದ್ದಿರಿ ಇದೆಲ್ಲ ಫೇಕ್ ನ್ಯೂಸ್,ಇದರಲ್ಲಿ ಸತ್ಯಾಂಶವಿಲ್ಲ ನಮ್ಮ ಇಡೀ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ" ಎಂದರು. ಇದೇ ಅವರೆಲ್ಲ ಎಲ್ಲಿದ್ದಾರೆ ಎಂದು ಕೇಳಿದಾಗ "ಅವರೆಲ್ಲ ರೂಮನಲ್ಲಿದ್ದಾರೆ ಅವರು ಬಂದು ನಿಮ್ಮನ್ನೆಲ್ಲ ಬಂದು ಭೇಟಿಯಾಗಲಿದ್ದಾರೆ ಎಂದರು.




ಇನ್ನೊಂದೆಡೆ ತಮ್ಮ ಡಿಕೆ ಸುರೇಶ ಆಸ್ಪತ್ರೆಗೆ ಭೇಟಿ ಎದೆ ನೋವಿನ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದರು.ಇನ್ನೊಂದೆಡೆ ಈಗ ಘಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ " ನಮ್ಮ ಸಹೋದ್ಯೋಗಿಯೊಬ್ಬರು ಆರಾಮ ಇಲ್ಲದೆ ಹೋದಲ್ಲಿ ಅವರನ್ನು ನೋಡಲು ಹೋಗುವುದು ಸಹಜ,ನನಗೆ ಆ ವ್ಯಕ್ತಿ ಯಾರು ಎಂದು ಗೊತ್ತಿಲ್ಲ, ನಾನು ನಿಮ್ಮ ಪ್ರಶ್ನೆಗೆ ಅಷ್ಟೇ ಉತ್ತರಿಸುತ್ತಿದ್ದೇನೆ ಎಂದು ತಿಳಿಸಿದರು.