ತಿರುಪತಿ: ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಂದು 86ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ಹಿನ್ನಲೆಯಲ್ಲಿ ತಿರುಪತಿಗೆ ತೆರಳಿರುವ ದೇವೇಗೌಡರು ತಿರುಮಲದಲ್ಲಿ  ಶ್ರೀ ವೆಂಕಟೇಶ್ವರ ಸ್ವಾಮಿ ದಶ೯ನ ಪಡೆದರು. ಪತ್ನಿ ಚೆನ್ನಮ್ಮ, ಪುತ್ರ ಮಾಜಿ ಸಚಿವ ರೇವಣ್ಣ,  ಬಾಲಕೃಷ್ಣೇಗೌಡ, ರಮೇಶ್ ಗೌಡ, ಪುತ್ರಿಯರಾದ ಶೈಲಜಾ, ಡಾ.ಅನಸೂಯ ಹಾಗೂ ಮೊಮ್ಮಕ್ಕಳು ಕೂಡ ಶ್ರೀ ವೆಂಕಟೇಶ್ವರ ಸ್ವಾಮಿ ದಶ೯ನ ಪಡೆದರು.



COMMERCIAL BREAK
SCROLL TO CONTINUE READING

ಹುಟ್ಟು ಹಬ್ಬದ ಕಾರಣಕ್ಕಾಗಿ ಟಿಟಿಡಿಯಿಂದ ವೆಂಕಟೇಶ್ವರನ ಪ್ರಸಾದ ನೀಡಿ, ದೇವೇಗೌಡರನ್ನು ಸನ್ಮಾನಿಸಲಾಯಿತು. 


ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ವಿರೋಧಪಕ್ಷದ ನಾಯಕರಾಗಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕೀರ್ತಿ ನಿಮ್ಮದು. ನಾಡಿನ ನೆಲ,ಜಲ,ಭಾಷೆ ಬಗೆಗಿನ ನಿಮ್ಮ  ಬದ್ಧತೆ ನಮಗೆಲ್ಲರಿಗೂ ಸ್ಪೂರ್ತಿದಾಯಕ. ನೂರು ಕಾಲ ಆಯುಷ್ಯ- ಆರೋಗ್ಯ ನಿಮ್ಮದಾಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ಮೂಲಕ ದೇವೇಗೌಡರಿಗೆ ಶುಭಕೋರಿದ್ದಾರೆ.