ಬೆಂಗಳೂರು : ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನೆಲೆಯಲ್ಲಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಟಿಟಿಡಿಯಲ್ಲಿ ಇಂದಿನಿಂದ ನಡೆಯಲಿದೆ ಪವಿತ್ರೋತ್ಸವ ನಡೆಯಲಿದೆ. 
ಸಂಜೆ 6 ಗಂಟೆಯಿಂದ ಸೋಮವಾರದವರೆಗೆ ಶುದ್ದಿಕಾರ್ಯ ಜರುಗಲಿದೆ. ಈ ಪವಿತ್ರೋತ್ಸವ ಕಾರ್ಯ ಮೂರು ದಿನಗಳ ಕಾಲ ನಡೆಯಲಿದೆ. 


COMMERCIAL BREAK
SCROLL TO CONTINUE READING

ತಿರುಪತಿ ತಿಮ್ಮಪ್ಪನ ಸನ್ನಿಧಾನದ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ಇದೀಗ ಸಂಚಲನ ಉಂಟು ಮಾಡಿದೆ. ಭಕ್ತರ ಧಾರ್ಮಿಕ ಭಾವನೆಗೆ ಇದು ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿಟಿಡಿಯಲ್ಲಿ ಇಂದು ಸಂಜೆಯಿಂದ 
ಮೂರು ದಿನಗಳವರೆಗೆ ಪವಿತ್ರೋತ್ಸವ ನಡೆಯಲಿದೆ. 


ಇದನ್ನೂ ಓದಿ : ಕುಮಾರ್‌ ಬಂಗಾರಪ್ಪ ನಿವಾಸದಲ್ಲಿ ಮೀಟಿಂಗ್


ಪವಿತ್ರೋತ್ಸವದ ಅಂಗವಾಗಿ ಮೊದಲ ದಿನ  ಆಚಾರ್ಯವರನಮ್, ಎರಡನೇ ದಿನ ಹೋಮ, ಮೂರನೇ ದಿನ ಪವಿತ್ರ ಸಮರ್ಪಣ ಹೋಮ ನಡೆಯಲಿದೆ. 


ಮೂರು ದಿನ ಪವಿತ್ರೋತ್ಸವ ಏನೆಲ್ಲ ನಡೆಯಲಿದೆ..?
ಮೊದಲ ದಿನ ಅಂದರೆ ಇಂದು ಸಂಜೆ 6:30 - ಆಚಾರ್ಯವರನಮ್
- ಸಂಜೆ 7:30 - ಅಂಕುಣಾರ್ಪಣಮ್
- ರಾತ್ರಿ 8:30 - ಏಕಾಂತ ಸೇವೆ


ಸೆಪ್ಟಂಬರ್ 28 ಶನಿವಾರ (ಎರಡನೇ ದಿನ )
- ಬೆಳಗ್ಗೆ 8:30- ಯಾಗಶಾಲ ವೈದಿಕ
- ಬೆಳಗ್ಗೆ 10:30-11:30 - ಸ್ನಾಪನ ತಿರುವಂಜನಮ್
- ಸಂಜೆ 6:30 - ಯಾಗಶಾಲ ವೈದಿಕ , ಪವಿತ್ರ ಪ್ರತಿಷ್ಟ
- ರಾತ್ರಿ 8:30 - ಏಕಾಂತ ಸೇವೆ


ಸೆಪ್ಟಂಬರ್ 29 ಭಾನುವಾರ (ಮೂರನೇ ದಿನ )
- ಬೆಳಗ್ಗೆ 8:30 - ಯಾಗಶಾಲ ವೈದಿಕ
- ಬೆಳಗ್ಗೆ 10:30-11:30 - ಸ್ನಾಪನ ತಿರುವಂಜನಮ್
- ಮಧ್ಯಾಹ್ನ 2:30-01:30 - ಪವಿತ್ರ ಸಮರ್ಪಣ
- ಸಂಜೆ  6:30 - ಯಾಗಶಾಲ ವೈದಿಕ


ಇದನ್ನೂ ಓದಿ : ಭವಿಷ್ಯದಲ್ಲಿ ಎದುರಾಗೋ ಕಾನೂನು ಸಂಕಷ್ಟದಿಂದ ರಕ್ಷಣೆ


ಈ ಪವಿತ್ರೋತ್ಸವಕ್ಕೆ ತಿರುಪತಿಯಿಂದ 10 ಅರ್ಚಕರ ತಂದ ಆಗಮಿಸಲಿದೆ. ಈ ಅರ್ಚಕರಿಂದ  ಮೂರು ದಿನದ‌ ಪೂಜೆ,ಹೋಮ,ಹವನ ನಡೆಯಲಿದೆ. ಇದರ  ಪೂರ್ವಭಾವಿಯಾಗಿ ಮಂಗಳವಾರ ದೇಗುಲದ ಶುದ್ಧಿಕಾರ್ಯ ನಡೆಸಲಾಗಿದೆ. ಪವಿತ್ರೋತ್ಸವ ಶುದ್ದಿಕಾರ್ಯದಲ್ಲಿ ಭಾಗಿಯಾಗಲು ಭಕ್ತರಿಗೂ ಅವಕಾಶ ಕಲ್ಪಿಸಲಾಗಿದೆ. ಇಬ್ಬರು 1 ಸಾವಿರ ರೂಪಾಯಿ ರಶೀದಿ ಪಡೆದು ಪೂಜೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.