Karnataka Govt Fall: ಕಾಂಗ್ರೆಸ್ ಹಗರಣಗಳಲ್ಲಿಯೇ ಮುಳುಗುವುದಕ್ಕೆ ಮೂರೇ ಗೇಣು ಬಾಕಿ‌ ಇದೆ ಎಂದು ಮಾಜಿ‌ ಡಿಸಿಎಂ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಸರ್ಕಾರ ಪತನದ ಕುರಿತು ಭವಿಷ್ಯ ನುಡಿದಿದ್ದಾರೆ.


COMMERCIAL BREAK
SCROLL TO CONTINUE READING

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಮಾತನಾಡಿದ ಮಾಜಿ‌ ಡಿಸಿಎಂ ಗೋವಿಂದ ಕಾರಜೋಳ (Former DCM Govinda Karajola), ಬಿಜೆಪಿ ತಿರುಕನ ಕನಸು ಕಾಣುತ್ತಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 


ಇದನ್ನೂ ಓದಿ- ಕಾಂಗ್ರೆಸ್ ಹಿರಿಯ ನಾಯಕರ ಭ್ರಷ್ಟಾಚಾರ ಸಮರ್ಥನೆ ವಿಪರ್ಯಾಸ: ಶಾಸಕ ಮಹೇಶ್ ಟೆಂಗಿನಕಾಯಿ


ಕಾಂಗ್ರೆಸ್ ಮುಳುಗಳು ಕೇವಲ‌ ಮೂರೇ ಗೇಣು ಬಾಕಿ: 
ಅದು ತಿರುಕನ‌ ಕನಸೋ, ಹಾಲು ಕುಡಿದು ಸಾಯ್ತಾರೋ ನೀವೆ ಕಾದು ನೋಡಿ. ಕಾಂಗ್ರೆಸ್ (Congress) ನವರು ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಮುಳುಗಳು ಕೇವಲ‌ ಮೂರೇ ಗೇಣು ಬಾಕಿಯಿದೆ. ವಾಲ್ಮೀಕಿ‌ ನಿಗಮದ ಹಗರಣ (Valmiki Corporation Scam) ಸಣ್ಣದಲ್ಲ, ಸರ್ಕಾರದ ಖಜಾನೆಯನ್ನೇ ಲೂಟಿ ಹೊಡೆದಿದ್ದಾರೆ.


ಇದನ್ನೂ ಓದಿ- KSOU: ಆಟೋ, ಕ್ಯಾಬ್ ಡ್ರೈವರ್ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಷ್ಟು ವಿಶೇಷ ರಿಯಾಯಿತಿ


ಮೂಡಾದಲ್ಲೂ (MUDA) ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನೆರೆ ರಾಜ್ಯದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಹಣ ಕೊಟ್ಟಿದ್ದಾರೆ. ಈ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.