"ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡೊವರೆಗೂ ಹೋರಾಟ ಮುಂದುವರೆಯುತ್ತೆ"

ಕೆಂಗೇರಿಯಿಂದ ಬಿಡದಿಯವರಿಗೆ ಎರಡು ಪಕ್ಷದ ಕಾರ್ಯಕರ್ತರು ನಮ್ಮ ಹೆಗಲಿಗೆ ಹೆಗಲು ಕೊಟ್ಟು, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದೀರಿ, ನಮಗೆ  ಹುಮ್ಮಸ್ಸು ಕೊಟ್ಟಿದ್ದೀರಿ ಎಂದರು.

Written by - Prashobh Devanahalli | Edited by - Manjunath N | Last Updated : Aug 4, 2024, 08:36 PM IST
  • ಇನ್ನು ರಾಮನಗರ ಜನರ ಆಶೀರ್ವಾದದಿಂದ ಕುಮಾರಸ್ವಾಮಿಯವರು 4 ಬಾರಿ ಸಿಎಂ ಆಗಿದ್ದಾರೆ.
  • ನನ್ನ ಮೇಲೆ ಸಹ ಅದೇ ಪ್ರೀತಿ ತೋರಿಸಿದ್ದೀರ, ಸೋಲು-ಗೆಲುವು ಚುನಾವಣೆ ಯಲ್ಲಿ ಸಾಮಾನ್ಯ, ನಾನು ಸೋಲಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ,
  • ಆದ್ರೆ ಜಿಲ್ಲೆಯ ಜನ ಕುಮಾರಣ್ಣಗೆ ನೀಡಿರೋ ಪ್ರೀತಿ, ವಿಶ್ವಾಸ ನಾವು ಎಂದಿಗೂ ಮರೆಯಲ್ಲ
"ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡೊವರೆಗೂ ಹೋರಾಟ ಮುಂದುವರೆಯುತ್ತೆ" title=

ರಾಮನಗರ: ವಾಲ್ಮೀಕಿ ಮತ್ತು ಮೂಡಾ ಹಗರಣಗಳ ವಿರುದ್ಧ 2ನೇ ದಿನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ನಿನ್ನೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.ನಿನ್ನೆ ಮೈಸೂರು ಪಾದಯಾತ್ರೆಗೆ ಇಬ್ಬರು ನಾಯಕರು ಚಾಲನೆ ನೀಡಿದ್ದಾರೆ. ಎರಡೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಕೆಂಗೇರಿಯಿಂದ ಬಿಡದಿಯವರಿಗೆ ಎರಡು ಪಕ್ಷದ ಕಾರ್ಯಕರ್ತರು ನಮ್ಮ ಹೆಗಲಿಗೆ ಹೆಗಲು ಕೊಟ್ಟು, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದೀರಿ, ನಮಗೆ  ಹುಮ್ಮಸ್ಸು ಕೊಟ್ಟಿದ್ದೀರಿ ಎಂದರು..

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ  ಸಿದ್ದರಾಮಯ್ಯನವರು ಸಮಾಜವಾದಿ ಅಂತಾರೆ, ಆದ್ರೆ ಮಜವಾದ ಕೆಲಸ ಮಾಡುತ್ತಿದ್ದಾರೆ.ವಾಲ್ಮೀಕಿ ಹಗರಣ ದೇಶದ ಇತಿಹಾಸ ದಲ್ಲೇ ಬ್ಯಾಂಕ್ ಟ್ರಾನ್ಸಾಕ್ಷನ್ ಮೂಲಕ ನಡೆದಿರೋ ಅವ್ಯವಹಾರವಾಗಿದೆ.ಅಲ್ಲದೇ ಸಿಎಂ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ ಜೊತೆ ಡೇಟಿಂಗ್ ಮಾಡಿದ್ರಾ ವಿರಾಟ್!? ಕ್ಯಾಮರಾ ನೋಡ್ತಿದ್ದಂತೆ ಮುಖ ಮುಚ್ಚಿಕೊಂಡ ಸುಂದರಿ!! ಫೋಟೋ ವೈರಲ್

ಇನ್ನು ರಾಮನಗರ ಜನರ ಆಶೀರ್ವಾದದಿಂದ ಕುಮಾರಸ್ವಾಮಿಯವರು 4 ಬಾರಿ ಸಿಎಂ ಆಗಿದ್ದಾರೆ. ನನ್ನ ಮೇಲೆ ಸಹ  ಅದೇ ಪ್ರೀತಿ ತೋರಿಸಿದ್ದೀರ, ಸೋಲು-ಗೆಲುವು ಚುನಾವಣೆ ಯಲ್ಲಿ ಸಾಮಾನ್ಯ, ನಾನು ಸೋಲಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಆದ್ರೆ ಜಿಲ್ಲೆಯ ಜನ ಕುಮಾರಣ್ಣಗೆ ನೀಡಿರೋ ಪ್ರೀತಿ, ವಿಶ್ವಾಸ ನಾವು ಎಂದಿಗೂ ಮರೆಯಲ್ಲ. ಕುಮಾರಸ್ವಾಮಿ ಅವರು ಕೊಟ್ಟ 20 ತಿಂಗಳ ಅಧಿಕಾರ ಎಂದಿಗೂ ಮರೆಯಲಾಗಲ್ಲ‌. ಅಂದು ಮೈತ್ರಿ ಸರ್ಕಾರದಲ್ಲಿ  ಕುಮಾರಸ್ವಾಮಿ ಕೆಲಸ ಮಾಡೋಕೆ ಕಾರಣ  ಬಿ.ಎಸ್  ಯಡಿಯೂರಪ್ಪ ನವರು ಇದನ್ನ ನಾವು ಮುಂದುವರೆಸುತ್ತೇವೆ  ಎಂದು ರಾಮನಗರ ವೇದಿಕೆ ಕಾರ್ಯಕ್ರಮದಲ್ಲಿ  ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿಗಳಾದ  ಬಿ.ಎಸ್ ಯಡಿಯೂರಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ  ಬಿ.ವೈ ವಿಜಯೇಂದ್ರರವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ  ಸಿ.ಬಿ ಸುರೇಶ್ ಬಾಬು ಅವರು, ಡಾ ಅಶ್ವಥ್ ನಾರಾಯಣ್ ಅವರು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು, ಶಾಸಕರಾದ  ಅರವಿಂದ್ ಬೆಲ್ಲದ್ ಅವರು, ಭೋಜೇಗೌಡ ಅವರು ಸೇರಿದಂತೆ ಎರಡೂ ಪಕ್ಷಗಳ ಶಾಸಕರು, ಸಂಸದರು, ನಾಯಕರು ಭಾಗಿಯಾಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News