ಬೆಂಗಳೂರು : ದಿನೇ ದಿನೇ ರಾಜ್ಯದಲ್ಲಿ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಇದರ ಮಧ್ಯೆ ಕೆಲವೆಡೆ ತುಂತುರು ಮಳೆಯಾಗುತ್ತಿದೆ. ಈ ನಡುವೆ  ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.  ನಗರದಲ್ಲಿ ಸಂಜೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.  


COMMERCIAL BREAK
SCROLL TO CONTINUE READING

ಹವಾಮಾನ ಇಲಾಖೆ ಮುನ್ಸೂಚನೆ :
ಸಂಜೆಯ ವೇಳೆಗೆ ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ವರದಿ ಮಾಡಿದೆ. ಮಾತ್ರವಲ್ಲ ರಾಜ್ಯದ  ಕೆಲವು ಕಡೆ ಗುಡುಗು ಸಹಿತ ಮಳೆ ಸಾಧ್ಯತೆ ಇದೆ ಎನ್ನಲಾಗಿದೆ.


ಇದನ್ನೂ ಓದಿ : SSLC ಪರೀಕ್ಷೆ ವೇಳೆ ಅವ್ಯವಹಾರ: ಕಲಬುರಗಿಯಲ್ಲಿ 16 ಶಿಕ್ಷಕರು ಅಮಾನತು!


ಆಲಿಕಲ್ಲು ಮಳೆ ಸಾಧ್ಯತೆ: 
ಈ ಮಧ್ಯೆ ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯಾಗುವ ಸಂಭವ ಇದೆ ಎಂದು ಹೇಳಿದೆ. ಯಾದಗಿರಿ, ಕಲಬುರಗಿ, ವಿಜಯಪುರ, ಬೀದರ್ ಜಿಲ್ಲೆಯ ಒಂದೆರಡು  ಸ್ಥಳಗಳಲ್ಲಿ  ಆಲಿಕಲ್ಲು ಮಳೆಯಾಗಲಿದೆ. 


ಈ ಪ್ರದೇಶಗಳಲ್ಲಿ ಸಾಧಾರಣ ಮಳೆ : 
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಕಡೆ ಮಳೆಯಾಗಲಿದೆ. ಉತ್ತರ ಒಳನಾಡಿನ ,ಬೆಳಗಾವಿ, ಬೀದರ್, ಗದಗ, ಮತ್ತು ಹಾವೇರಿ ಜಿಲ್ಲೆಗಳಲ್ಲಿ , ದಕ್ಷಿಣ ಒಳನಾಡಿನ ಶಿವಮೊಗ್ಗ, ಮೈಸೂರು, ಕೊಡಗು, ಹಾಸನ ,ದಾವಣಗೆರೆ, ಚಿತ್ರದುರ್ಗ ಸಾಧಾರಣ ಮಳೆಯಾಗಲಿದೆ. 


ಇದನ್ನೂ ಓದಿ : ಬಂಡೀಪುರದ  ಕಾಡಲ್ಲಿ ವಿಶೇಷ ಟೀ ಟೇಸ್ಟ್ ಮಾಡಲಿದ್ದಾರೆ ಪ್ರಧಾನಿ ನಮೋ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.