ಬೆಂಗಳೂರು: ಕಮಿಷನರ್ ಕಚೇರಿಗೆ ಭೇಟಿ ಕೊಟ್ಟು ಹೋಮ್ ಮಿನಿಸ್ಟರ್ ಡಾ. ಜಿ ಪರಮೇಶ್ವರ್‌ ಮೀಟಿಂಗ್ ಮಾಡಿದ್ರು.. ಎರಡು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಹೆಣ್ಣುಮಕ್ಕಳ ಸೇಫ್ಟಿ, ಡ್ರಗ್, ರೌಡಿಸಂ, ಮಾಫಿಯಾಗೆ ಬ್ರೇಕ್ ಹಾಕಬೇಕು ಎಂದು ಡಿಜಿ ಐಜಿಪಿ, ಕಮಿಷನರ್, ಅಡಿಷನಲ್ ಕಮಿಷನರ್, ಡಿಸಿಪಿ ಸೇರಿ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸೂಚನೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ನಿರ್ಭಯ ಕೇಸ್ ಆದ್ಮೇಲೆ ಹೆಣ್ಣುಮಕ್ಕಳ ಸೇಫ್ಟಿಗೆ ಸೇಫ್ ಸಿಟಿ ಪ್ರಾಜೆಕ್ಟ್ ಮಾಡಲಾಗಿದೆ ಅದರ ಅಂಗವಾಗಿ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶ ಹಾಗೂ ಮಹಿಳೆಯರು ಹೆಚ್ಚು ಓಡಾಡೋ ಕಡೆ ಹೈಯೆಂಡ್ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಿದ್ದಾರೆ. ಈಗಾಗಲೇ 7000ಕ್ಕೂ ಹೆಚ್ಚು ಕ್ಯಾಮರಾ ಅಳವಡಿಕೆಗೆ ಯೋಜನೆ ಹಾಕಿಕೊಳ್ಳಲಾಗಿದ್ದು, ಕಮಾಂಡ್ ಸೆಂಟರ್ ಮೂಲಕ ಮಹಿಳೆಯರು ಓಡಾಡೋ ಜಾಗಗಳು, ಸೇಫ್ಟಿ ಐಲೆಂಡ್ ಮೂಲಕ ಬರೋ ಮಾಹಿತಿಗಳ ಬಗ್ಗೆ ಗಮನ ಹರಿಸಲು ಸೂಚಿಸಿದ್ದೇನೆ ಎಂದರು.‌ 


ಇದನ್ನೂ ಓದಿ: "ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ" ಎಂಬ ಮಾತನ್ನು ನಾವು ನಂಬಿದ್ದೇವೆ"


ಈಗಾಗಲೇ ಸೇಫ್‌ ಸಿಟಿ ಪ್ರಾಜೆಕ್ಟ್ 70% ಮುಗಿದಿದ್ದು, ಉಳಿದ ಕೆಲಸಗಳು ನಡೀತಿದೆ ಅಂದ್ರು. ಡ್ರಗ್ ಮಾಫಿಯಾದ ಬಗ್ಗೆಯೂ ಮಾತನಾಡಿದ ಅವರು ವಿದೇಶಿ ಪ್ರಜೆಗಳು, ವಿದೇಶಿ ಮೂಲದ ವಿಧ್ಯಾರ್ಥಿಗಳೇ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗುತ್ತಿದ್ದಾರೆ. ನಗರದಲ್ಲಿ ಡ್ರಗ್ ಮಾಫಿಯಾ ಸಂಪೂರ್ಣ ಮಟ್ಟ ಹಾಕೋ ಗುರಿ ಹೊಂದಿದ್ದು ಮುಖ್ಯವಾಗಿ ಪೆಡ್ಲರ್ ಗಳನ್ನ ಮಾನಿಟರ್ ಮಾಡಲಾಗಿದೆ. ಹೊಯ್ಸಳ ಸಿಬ್ಬಂದಿಗೆ ಇನ್ಮುಂದೆ ಬಾಡಿ ಕ್ಯಾಮರಾ ಅಳವಡಿಕೆ ಮಾಡಿ ಅವರ ಪ್ರತೀ ಸಂಭಾಷಣೆ, ಜನರ ಸಂಭಾಷಣೆ ರೆಕಾರ್ಡ್ ಆಗುತ್ತೆ ಎಂದು ಹೇಳಿದರು. 


ಬೆಂಗಳೂರು ಟ್ರಾಫಿಕ್ ಬಗ್ಗೆ ಎಲ್ಲಾ ಕಡೆ ನೆಗಟಿವ್ ಇದೆ. ಅದನ್ನ ಸಂಪೂರ್ಣ ಕಮ್ಮಿ ಮಾಡ್ಬೇಕು.. ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಇಲ್ಲದಂತೆ ಮಾಡ್ಬೇಕು ಅಂತಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಅಲ್ಲದೇ ಸಂಚಾರಿ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಗಳು ಪೀಕ್ ಹವರ್‌ನಲ್ಲಿ ಹಾಗೂ ಬೆಳಗ್ಗೆ ಎರಡು ತಾಸು, ಸಂಜೆ ಎರಡು ತಾಸು ಫಿಲ್ಡ್ ನಲ್ಲಿರ್ಬೇಕು.. ಎಲ್ಲಾದ್ರು ಟ್ರಾಫಿಕ್ ಆದ್ರೆ ಕೂಡಲೇ ಕ್ಲಿಯರ್ ಮಾಡ್ಬೇಕು. ಏನಾದ್ರು ಟ್ರಾಫಿಕ್ ಕಿರಿಕಿರಿ ಬಗ್ಗೆ ದೂರು ಬಂದ್ರೆ ಡಿಸಿಪಿಗಳೇ ನೇರ ಹೊಣೆ ಅಂತಾ ಖಡಕ್ ವಾರ್ನ್ ಮಾಡಿದರು.


ಇದನ್ನೂ ಓದಿ: ನನ್ನ ರಾಜಕೀಯ ನಿಲುವಿನಲ್ಲಿ ರಾಜಿಯಿಲ್ಲ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ


ಇನ್ನು ಇದೇ ವೇಳೆ ಮತಾಂತರ ನಿಷೇಧ ಕಾಯ್ದೆ ಕಾನೂನು ವಿರುದ್ಧವಾಗಿದೆ. ಸಾಂವಿಧಾನಿಕ ಕ್ರಮಕ್ಕೆ ಒತ್ತು ಕೊಡಲಾಗುತ್ತೆ.ಈ ಹಿಂದೆ ಕೂಡ ಮತಾಂತರ ಇತ್ತು. ಮತಾಂತರ ಕೇಸ್ ಗಳಲ್ಲಿ ಸಾಂವಿಧಾನಿಕವಾಗಿ ಏನ್ ಮಾಡ್ಬೇಕು ಅದನ್ನ ಮಾಡ್ತೀವಿ ಎಂದರು.


ಇದೇ ವೇಳೆ ಕಲಬುರಗಿಯ ಮರಳು ದಂಧೆಯಲ್ಲಿ ಕಾನ್ಸ್‌ಟೇಬಲ್ ಕೊಲೆ ಬಗ್ಗೆ ಮಾತನಾಡಿದ ಹೆಚ್ ಎಮ್, ಭಿಮಾತೀರದಲ್ಲಿ ಮರಳು ದಂಧೆ ಇಂದು ನಿನ್ನೆಯದಲ್ಲ. ಈ ಮುಂಚೆ ಉಡುಪಿಯಲ್ಲೂ ಈ ರೀತಿ ಘಟನೆ ನಡೆದಿದೆ. ಇನ್ಮುಂದೆ ಮರಳು ದಂಧೆ ಬಗ್ಗೆ ಗಮನಹರಿಸಲಾಗುತ್ತೆ. ಬೇರೆ ಅಧಿಕಾರಿಗಳು ಕೂಡ ಜವಾಬ್ದಾರಿ ವಹಿಸ್ಬೇಕು.. ಪೊಲೀಸ್ ಸಿಬ್ಬಂದಿ ಮರಳು ದಂಧೇಲಿ ಭಾಗಿಯಾಗಿದ್ರೆ ಕಠಿಣ ಕ್ರಮ ಎಂದಿದ್ದಾರೆ. ಒಟ್ಟಾರೆಯಾಗಿ ಇಂದು ನಗರ ಪೊಲೀಸರ ಜೊತೆ ಮೀಟಿಂಗ್ ಮಾಡಿ ನಗರವನ್ನ ಸೇಫ್ ಆಗಿ ಇಡೋಕೆ ಖಡಕ್ ಸೂಚನೆ ನೀಡಿದ್ದಾರೆ. ಡ್ರಗ್ ಮಾಫಿಯಾ, ರೌಡಿಸಂ ಮೇಲೆ ಕಣ್ಣಿಡಲು ಸೂಚಿಸಿದ್ದಾರೆ.


ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.