ಬೆಂಗಳೂರು: ಪ್ರಧಾನಿ ಮೋದಿಗೆ ಸಾಲ ಮಾಡಿ ತುಪ್ಪ ತಿನ್ನುವ ಚಾಳಿ ಇದೆ. ಹೀಗಾಗಿ ಸರ್ಕಾರಿ ಆಸ್ತಿಯನ್ನು ಮಾರುತ್ತಿದ್ದಾರೆಂಬ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಕರ್ನಾಟಕ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಮಾನ್ಯ ಖರ್ಗೆ ಅವರೇ ಒಂದೇ ಸಾಲಿನಲ್ಲಿ ಉತ್ತರಿಸಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಒಟ್ಟಾರೆ ಆಸ್ತಿ ಎಷ್ಟು ಸಾವಿರ ಕೋಟಿ?’ ಎಂದು ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

[[{"fid":"218815","view_mode":"default","fields":{"format":"default","field_file_image_alt_text[und][0][value]":"Mallikarjun-Kharge-1.jpg","field_file_image_title_text[und][0][value]":"Mallikarjun-Kharge-1.jpg"},"type":"media","field_deltas":{"1":{"format":"default","field_file_image_alt_text[und][0][value]":"Mallikarjun-Kharge-1.jpg","field_file_image_title_text[und][0][value]":"Mallikarjun-Kharge-1.jpg"}},"link_text":false,"attributes":{"alt":"Mallikarjun-Kharge-1.jpg","title":"Mallikarjun-Kharge-1.jpg","class":"media-element file-default","data-delta":"1"}}]]


#ಉತ್ತರಿಸಿಖರ್ಗೆ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಬೇನಾಮಿ ರೂಪದಲ್ಲಿರುವುದನ್ನೂ ಸೇರಿಸಿ ನಿಮ್ಮ ಆಸ್ತಿ ಎಷ್ಟಿದೆ ಎಂದು ಹೇಳುವ ಧೈರ್ಯ ಇದೆಯೇ?’ ಎಂದು ಪ್ರಶ್ನಿಸಿದೆ. ‘ಮಲ್ಲಿಕಾರ್ಜುನ್ ಖರ್ಗೆ ಅವರೇ ನೀವು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಾಗ ನಿಮ್ಮ ಕುಟುಂಬದ ಸಂಪತ್ತು ಎಷ್ಟಿತ್ತು? ಈಗ ಅದು ಎಷ್ಟು ಪಟ್ಟು ಹೆಚ್ಚಾಗಿದೆ? ಹಾಗೆಯೇ ಆದಾಯದ ಮೂಲವನ್ನೂ ತಿಳಿಸಿ. ಕಲ್ಯಾಣ ಕರ್ನಾಟಕದ ಜನತೆಗಾಗಿ ಒಮ್ಮೆಯಾದರೂ ಸತ್ಯ ನುಡಿಯಿರಿ’ ಎಂದು ಬಿಜೆಪಿ ಟೀಕಿಸಿದೆ.


ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ


‘ಮೊನ್ನೆಯಷ್ಟೇ ಗಾಂಧಿ ತತ್ತ್ವದ ಬಗ್ಗೆ ಖರ್ಗೆ ಅವರು ಪುಂಖಾನುಪುಂಖವಾಗಿ ಮಾತನಾಡಿದ್ದಾರೆ. ಸತ್ಯ ಮತ್ತು ಅಹಿಂಸೆಯ ಮಹತ್ವ ತಿಳಿಸಿದ್ದಾರೆ. ಖರ್ಗೆಯವರೇ ಇಂದು ಆ ವಿಚಾರವನ್ನು ಕಾರ್ಯರೂಪಕ್ಕೆ ತರುವ ಅವಕಾಶವಿದೆ ನಿಮಗಿದೆ. ಸತ್ಯ ನುಡಿಯಿರಿ, ನೀವು ಮತ್ತು ನಿಮ್ಮ‌ ಕುಟುಂಬ ಎಷ್ಟು ಕೋಟಿಗೆ ಸರದಾರರು?’ ಅಂತಾ ಪ್ರಶ್ನಿಸಿದೆ.


ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.