ಬೆಂಗಳೂರು : ಹೊಸಕೋಟೆ ತಾಲೂಕಿನಲ್ಲಿ ಕೆಲವು ರಾಜಕಾರಣಿಗಳು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್  ವಾಗ್ದಾಳಿ ನಡೆಸಿದ್ದಾರೆ. ಸೂಲಿಬೆಲೆ ಯಲ್ಲಿ  ಮಾತನಾಡಿದ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಶರತ್ ಬಚ್ಛೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಪಕ್ಷ ಬಿಟ್ಟು ಶರತ್ ಬಚ್ಚೇಗೌಡಗೆ ಭಿಕ್ಷೆ ನೀಡಿದ್ದೇನೆ ಎಂದು ಎಂಟಿಬಿ ಇದೇ ವೇಳೆ ಗುಡುಗಿದ್ದಾರೆ. 


COMMERCIAL BREAK
SCROLL TO CONTINUE READING

ತಾಲೂಕಿನಾದ್ಯಾಂತ 50ಕ್ಕೂ ಅಧಿಕ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದೇನೆ, ಆದರೆ ಶಾಸಕ ಹಾಗೂ ಸಂಸದರು ಒಂದು ದೇವಸ್ಥಾನ ಸಹ ನಿರ್ಮಾಣ ಮಾಡಿಲ್ಲ ಎಂದು ಎಂಟಿಬಿ ಹೇಳಿದ್ದಾರೆ. ನಾನು ಯಾರಿಂದಲೂ ಲಂಚ ಪಡೆದಿಲ್ಲ.  ದೇವಾಲಯ ನಿರ್ಮಾಣ ಮಾಡಲು ಸಹಾಯ ಮಾಡುವವರು ಇದ್ದರೆ ನೀಡಿ ಎಂದು ಹೇಳಿದ್ದೇನೆ ಎಂದು ಎಂಟಿಬಿ  ನಾಗರಾಜ್  ಸ್ಪಷ್ಟಪಡಿಸಿದ್ದಾರೆ. 


ಇದನ್ನೂ ಓದಿ : "ಭ್ರಷ್ಟ ತಿಮಿಂಗಿಲಗಳನ್ನು ರಕ್ಷಿಸಲೆಂದೇ ಸಿಐಡಿ ಗಾಳ"


ಇದೆ ವೇಳೆ ರಾಮ ದೇವರ ಮೇಲೆ ಪ್ರಮಾಣ ಮಾಡುತ್ತೇನೆ ನನಗೆ ಲಂಚ ಪಡೆಯುವ ಬುದ್ದಿ ಇಲ್ಲ ಎಂದು ಎಂಟಿಬಿ   ಹೇಳಿದ್ದಾರೆ. ಲಂಚ ಪಡೆಯುವ ಬುದ್ದಿ ನನ್ನ ನನ್ನ ರಾಜಕೀಯ ಜೀವನದಲ್ಲಿ ಇಲ್ಲ ಎಂದವರು ಹೇಳಿದ್ದಾರೆ.  ನನಗೆ ದೇವರು ಬೇಕಾದಷ್ಟು ನೀಡಿದ್ದಾನೆ. ನಾನು ಪಕ್ಷ ಬಿಟ್ಟು ಬಂದು ಶರತ್ ಬಚ್ಚೇಗೌಡಗೆ ಭಿಕ್ಷೆ ನೀಡಿದ್ದೇನೆ ಎಂದು ಎಂಟಿಬಿ  ಇದೇ ವೇಳೆ ಹೇಳಿದ್ದಾರೆ. 


ಈ ಬಾರಿಯ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ. ಕ್ಷೇತ್ರದ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಂಟಿಬಿ ಭವಿಷ್ಯ ನುಡಿದಿದ್ದಾರೆ.  


ಇದನ್ನೂ ಓದಿ : ಡಿಕೆಶಿ ಭ್ರಷ್ಟಾಚಾರದ ಹಣದಿಂದಲೇ ರಾಜ್ಯ ಕಾಂಗ್ರೆಸ್ ಉಸಿರಾಡುತ್ತಿದೆ: ಬಿಜೆಪಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.