ಬೆಂಗಳೂರು: ರಾಜ್ಯದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಕುಂಬಾರ ಸಮುದಾಯದಕ್ಕೆ ರಾಜಕೀಯವಾಗಿ ಬೆಳವಣಿಗೆ ಆಗಿಲ್ಲ ಎಂದು ಸಮುದಾಯದ ಕುಂಬಾರ ಗುಂಡಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ್ ಇನ್ನಿಲ್ಲ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ


ಬೆಂಗಳೂರಿನ‌ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಮಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಕುಂಬಾರ ಸಮುದಾಯಕ್ಕೆ ವಿಧಾನಪರಿಷತ್ ಸ್ಥಾನವೊಂದುನ್ನು ಮೀಸಲಿಡಬೇಕೆಂದು ಕುಂಬಾರ ಯುವ ಸೈನ್ಯ ಆಗ್ರಹಿಸಿದೆ. 


ತೆಲಸಂಗಿ ಗುರುಪೀಠದ ಕುಂಬಾರ ಗುಂಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಹಕ್ಕೊತ್ತಾಯ ವ್ಯಕ್ತಪಡಿಸಿದರು. ಸಮುದಾಯದ ನಾಯಕರು, ರಾಜಕೀಯವಾಗಿ ಸಮುದಾಯದ ಪ್ರಗತಿ ಹೊಂದಲು ಎಲ್ಲಾ ರಾಜಕೀಯ ಪಕ್ಷಗಳು ಕುಂಬಾರ ಸಮುದಾಯದಕ್ಕೆ ಒಂದಿಷ್ಟು ಸ್ಥಾನಗಳನ್ನ ಮೀಸಲಿಡಬೇಕು. ಸದ್ಯ ಪರಿಷತ್ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಒಂದು ಸ್ಥಾನವಾದ್ರು ಸಮುದಾಯಕ್ಕೆ ನೀಡಿ ಎಂದು ಆಗ್ರಹಿಸಿದ್ದಾರೆ. 


ಇದನ್ನೂ ಓದಿ: Karnataka SSLC Result 2022: ಎಸ್‌ಎಸ್‌ಎಲ್‌ಸಿ ಫಲಿತಾಂಶ ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ


ಇನ್ನು ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಅಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ, ಚಿತ್ರದುರ್ಗದ ಪ್ರವೀಣ್ ಕುಮಾರ್ ಕೆ.ಟಿ, ಸೇರಿದಂತೆ ಬೆಂಗಳೂರಿನ ನಾಗೇಶ್ ರವರು ಭಾಗಿಯಾಗಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.