ಬೆಂಗಳೂರು: ಬಿಜೆಪಿ ಶಾಸಕರು ಹೀನಾಯ ಸ್ಥಿತಿಗೆ ತಲುಪಿದ್ದಾರೆ, ಶಾಸಕರಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ ವಿರುದ್ಧ ಬಿಜೆಪಿಗರೇ ಪ್ರತಿಭಟನೆಗೆ ಇಳಿದಿದ್ದಾರೆ.. ಇದು ಬಿಜೆಪಿಯ ರಾಜಕೀಯ ದಿವಾಳಿತನವಲ್ಲದೆ ಇನ್ನೇನು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹೈಕಮಾಂಡ್ ನಾಯಕರು ರಾಜ್ಯದ ಯಾವೊಬ್ಬ ನಾಯಕರ ಮುಖವನ್ನೂ ನೋಡುತ್ತಿಲ್ಲ, 5 ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆಗೆ ಮುಂದಾಗುತ್ತಿಲ್ಲ. ರಾಜ್ಯದ ಜನರಿಂದಲೂ ತಿರಸ್ಕಾರ, ಹೈಕಮಾಂಡ್ ನಾಯಕರಿಂದಲೂ ತಿರಸ್ಕಾರ, ಬಿಜೆಪಿ ಈಗ ಯಾರಿಗೂ ಬೇಡದ ಅನಾಥ ಶಿಶುವಾಗಿದೆ! ವಿಪಕ್ಷ ನಾಯಕನ ಆಯ್ಕೆಯಾಗದಿದ್ದರೆ ಸದನಕ್ಕೆ ಗೈರಾಗುವ ಮೂಲಕ ಪ್ರತಿಭಟಿಸುತ್ತೇವೆ ಎನ್ನುವ ಶಾಸಕರು ಹತಾಶ ಸ್ಥಿತಿಗೆ ತಲುಪಿದ್ದಾರೆ ಅಲ್ಲವೇ ಬಿಜೆಪಿ?’ ಎಂದು ಪ್ರಶ್ನಿಸಿದೆ.


ರಸ್ತೆ ದಾಟುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು..!


‘ಜೆಡಿಎಸ್ ಬಿಜೆಪಿಯ ಆಶ್ರಯದಲ್ಲಿದೆಯೋ, ಬಿಜೆಪಿ ಜೆಡಿಎಸ್ ಸೇರಿಗಿನ ಆಶ್ರಯ ಪಡೆದಿದೆಯೋ ಎಂಬ ಅನುಮಾನ ಬಿಜೆಪಿಗರಿಗೇ ಶುರುವಾಗಿದೆ! ವಿರೋಧ ಪಕ್ಷದ ನಾಯಕನಿಲ್ಲದೆ ಸದನದ ಒಳಗೂ ಹೊರಗೂ ಬಿಜೆಪಿ ಅಬ್ಬೇಪಾರಿಯಂತಾಗಿದೆ, ಈ ಬಗ್ಗೆ ಬಿಜೆಪಿ ಶಾಸಕರ ಗೋಳು ಮುಗಿಲು ಮುಟ್ಟಿದೆ. ಬಿ.ಎಸ್.ಯಡಿಯೂರಪ್ಪರನ್ನೇ ದೆಹಲಿಯಲ್ಲಿ ಭೇಟಿಯಾಗದೆ ಅವಮಾನಿಸಿ ಕಳಿಸಿದೆ ಹೈಕಮಾಂಡ್, ಮೂಲೆಗುಂಪಾದ ಯಡಿಯೂರಪ್ಪರಲ್ಲಿ ಗೋಳು ಹೇಳಿಕೊಂಡರೆ ಉಪಯೋಗವಿದೆಯೇ.. ಒಟ್ಟಿನಲ್ಲಿ ಕರ್ನಾಟಕ ಬಿಜೆಪಿ ಈಗ ಮುಳುಗಿ ತಳ ಸೇರಿದ ಹಡಗು!’ ಎಂದು ಕಾಂಗ್ರೆಸ್ ಕುಟುಕಿದೆ.


ಯಡಿಯೂರಪ್ಪನವರ ಮೊರೆ ಹೋಗಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.


ರಾಜ್ಯಾದ್ಯಂತ ಬಂದ್‌ ಆಗಲಿವೆ ಪಡಿತರ ಅಂಗಡಿಗಳು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.