ಬೆಂಗಳೂರು: ದಿವಾಳಿಯಾಗಿರುವುದು ದೇಶವಲ್ಲ ಕಾಂಗ್ರೆಸ್ ಪಕ್ಷವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಗೆ ಬಿಜೆಪಿ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಏನೂ ಮಾಡದೇ ಲೋಕಸಭೆಯಲ್ಲಿ ಭಾಷಣ ಮಾಡುತ್ತಾರೆ. ಮೋದಿ ದೇಶವನ್ನು ಹಾಳೂ ಮಾಡುತ್ತಿದ್ದಾರೆ, ಅವರಿಂದ ದೇಶವೇ ದಿವಾಳಿಯಾಗುತ್ತಿದೆ ಎಂದು ಸಿದ್ದರಾಮಯ್ಯ(Siddaramaiah) ವಾಗ್ದಾಳಿಸಿದ್ದರು.


COMMERCIAL BREAK
SCROLL TO CONTINUE READING

ಸಿದ್ದರಾಮಯ್ಯ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ ದಿವಾಳಿಯಾಗಿದ್ದು ದೇಶವಲ್ಲ ಕಾಂಗ್ರೆಸ್‌ ಪಕ್ಷ. ಮೋದಿ(Narendra Modi) ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್‌ ಪಕ್ಷ ಒಂದೊಂದೇ ರಾಜ್ಯವನ್ನು ಕೈಚೆಲ್ಲುತ್ತಿದೆ’ ಅಂತಾ ಕುಟುಕಿದೆ.


ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕಾಲೇಜು ರಜೆ ಫೆ.16 ವರೆಗೆ ಮುಂದುವರಿಕೆ


‘ದೇಶದ ಸಂಪತ್ತನ್ನು ಲೂಟಿ ಮಾಡಿದ್ದೇ ನಕಲಿ ಗಾಂಧಿ ಕುಟುಂಬ. ಅಂದಹಾಗೆ ಯುಪಿಎ ಸರ್ಕಾರದ ಕಾಲದಲ್ಲೇನು ಬಂಗಾರವನ್ನು ರಸ್ತೆ ಬದಿಯಲ್ಲಿ ಸೇರು ಲೆಕ್ಕದಲ್ಲಿ ಮಾರುತ್ತಿದ್ದರೇ?’ ಅಂತಾ ವ್ಯಂಗ್ಯವಾಗಿ ಸಿದ್ದರಾಮಯ್ಯರಿಗೆ ಬಿಜೆಪಿ(BJP) ಪ್ರಶ್ನಿಸಿದೆ.


ಸಾಲ ಮಾಡಿರುವುದೇ ಮೋದಿ ಸರ್ಕಾರದ ಸಾಧನೆ


ಪ್ರಧಾನಿ ಮೋದಿ(PM Modi) ವಿರುದ್ಧ ಕಿಡಿಕಾರಿದ್ದ ಸಿದ್ದರಾಮಯ್ಯ, ಸಾಲ ಮಾಡಿರುವುದೇ ಬಿಜೆಪಿ ಸರ್ಕಾರ(Central Government)ದ ಸಾಧನೆ. ಕೇಂದ್ರಕ್ಕೆ 135 ಲಕ್ಷ 87 ಸಾವಿರ ಕೋಟಿ ರೂ. ಸಾಲವಿದೆ. ಈಗ 11 ಲಕ್ಷ ದ 59 ಸಾವಿರ ಕೋಟಿ ರೂ. ಸಾಲ ಮಾಡುವುದಾಗಿ ಹೇಳಿದ್ದಾರೆ. ಕೇಂದ್ರ 9 ಲಕ್ಷ ಕೋಟಿ ರೂ. ಬಡ್ಡಿ ಕಟ್ಟುತ್ತಿದೆ. ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಅಚ್ಛೇ ದಿನ್ ಆಯೇಂಗೆ ಎಂದರೆ ಇದೇನಾ ಅಂತಾ ವ್ಯಂಗ್ಯವಾಡಿದ್ದರು.


ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆ: ಅರ್ಜಿಯಲ್ಲಿನ ತಪ್ಪು ಮಾಹಿತಿ ಸರಿಪಡಿಸಲು ಎರಡು ದಿನಗಳವರೆಗೆ ಕಾಲಾವಕಾಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.