ಬೆಂಗಳೂರು: ತಿರುಪತಿ ತಿರುಮಲಕ್ಕೆ ನಂದಿನಿ ತುಪ್ಪ ಸ್ಥಗಿತಗೊಳಿಸಿರುವ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಮುಂದುವರೆದಿದೆ. ಈ ವಿಚಾರವಾಗಿ ಮಂಗಳವಾರವೂ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ನಂದಿನಿ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡುವುದನ್ನು ನಿಲ್ಲಿಸಿ ಒಂದೂವರೆ ವರ್ಷವಾಗಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಕ್ರಮ ಕೈಗೊಳ್ಳಲಾಗಿತ್ತು. ಬಿಜೆಪಿಗೆ ತಿರುಪತಿ ತಿಮ್ಮಪ್ಪನ ಮೇಲೆ ಗೌರವ, ಭಕ್ತಿ ಇರಲಿಲ್ಲವೇಕೆ?, ತಿಮ್ಮಪ್ಪನಿಗೆ ತುಪ್ಪ ಕೊಡದ ಬಿಜೆಪಿ ಹಿಂದೂ ವಿರೋಧಿ ಅಲ್ಲವೇ?, 2020 -2021ರಲ್ಲಿ ತುಪ್ಪ ಸರಬರಾಜನ್ನು ಸ್ಥಗಿತಗೊಳಿಸಿದ್ದೇಕೆ ಎಂಬುದಕ್ಕೆ ಬಿಜೆಪಿ ಉತ್ತರಿಸುವುದೇ? ಹಿಂದೂ ವಿರೋಧಿ ಬಿಜೆಪಿ ನಾಯಕರು ಉತ್ತರಿಸುವರೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗ ತಡೆಗೆ ಹೀಗೆ ಮಾಡಿ


‘ತಿರುಪತಿಗೆ ನಂದಿನಿ ತುಪ್ಪದ ಸರಬರಾಜನ್ನು 2020 - 2021ರಲ್ಲೇ ನಿಲ್ಲಿಸಿದ್ದು ಯಾವ ಸರ್ಕಾರ ಬಿಜೆಪಿ? ಆಗ ಯಾವ ಅಜೆಂಡಾವಾಗಿತ್ತು ಸಿಟಿ ರವಿಯವರೇ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರಬರಾಜು ನಿಲ್ಲಿಸಿದ್ದು ಏಕೆ? ಈ ಬಗ್ಗೆ ಬಿಜೆಪಿಗರು ಮೌನವಾಗಿರುವುದೇಕೆ? ಮಾರುಕಟ್ಟೆಯಲ್ಲಿ ನಂದಿನಿ ತುಪ್ಪಕ್ಕೆ ಬಹುಬೇಡಿಕೆ ಇರುವಾಗ ಕಡಿಮೆ ಮೊತ್ತಕ್ಕೆ ಸರಬರಾಜು ಮಾಡಿ ಕೆಎಂಎಫ್ ಹಾಗೂ ರೈತರಿಗೆ ನಷ್ಟ ಆಗಲು ಬಯಸುತ್ತಿದೆಯೇ ಬಿಜೆಪಿ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.


ಸಿದ್ದರಾಮಯ್ಯನವರ ತಾತ್ಸಾರ ನೀತಿ ರುಜುವಾತಾಗಿದೆ’ ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: ವ್ಯಕ್ತಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಿರುಕುಳ ಆರೋಪ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.