ಬೆಂಗಳೂರು: ಕರೋನವೈರಸ್ ಸಾವಿನ ಮೊದಲ ಪ್ರಕರಣವನ್ನು ಕರ್ನಾಟಕ ಆರೋಗ್ಯ ಇಲಾಖೆ ಗುರುವಾರ (ಮಾರ್ಚ್ 12) ದೃಢಪಡಿಸಿದೆ. ಕಲ್ಬುರ್ಗಿಯ 76 ವರ್ಷದ ವ್ಯಕ್ತಿ ಮಂಗಳವಾರ ನಿಧನರಾದರು, ಅವರಿಗೆ COVID 19  ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಆರೋಗ್ಯ ಇಲಾಖೆ ಹೊರಡಿಸಿರುವ ಹೇಳಿಕೆಯಲ್ಲಿ, "ಕಲ್ಬುರ್ಗಿ ಮೂಲದ 76 ವರ್ಷದ ವ್ಯಕ್ತಿ ನಿಧನರಾದರು ಮತ್ತು ಶಂಕಿತ COVID 19 ರೋಗಿಯಾಗಿದ್ದಾರೆ. ಅವರಲ್ಲಿ COVID 19ದೃಡೀಕರಿಸಲಾಗಿದೆ. ಪ್ರೋಟೋಕಾಲ್ ಪ್ರಕಾರ ಅಗತ್ಯ ಸಂಪರ್ಕ ಪತ್ತೆ, ಪ್ರತ್ಯೇಕತೆ ಮತ್ತು ಇತರ ಕ್ರಮಗಳನ್ನು ಮಾಡಲಾಗುತ್ತಿದೆ ಅವರು ಖಾಸಗಿ ಆಸ್ಪತ್ರೆಗೆ ಹೋದಾಗಿನಿಂದ ತೆಲಂಗಾಣ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.



ಈ ವ್ಯಕ್ತಿ ಸುಮಾರು 10 ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಕರ್ನಾಟಕಕ್ಕೆ ಮರಳಿದ್ದು, ಕಲ್ಬುರ್ಗಿ ಜಿಲ್ಲೆಯಲ್ಲಿ ಮಂಗಳವಾರ ಮೃತಪಟ್ಟಿದ್ದರು.


COVID-19 ಗಾಗಿ ರಾಜ್ಯಗಳು ಸಹಾಯವಾಣಿ ಸಂಖ್ಯೆಗಳನ್ನು ನೀಡಿವೆ



ಹಿಂದಿನ ದಿನ, ಗ್ರೀಸ್‌ನಿಂದ ಹಿಂದಿರುಗಿದ 26 ವರ್ಷದ ವ್ಯಕ್ತಿಯೂ ಸಹ ಕರೋನವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದು, ಇದು ಕರ್ನಾಟಕದಲ್ಲಿ ಐದನೇ ಪ್ರಕರಣವಾಗಿದೆ ಎಂದು ಆರೋಗ್ಯ ಇಲಾಖೆ ಇಂದು ತಿಳಿಸಿದೆ.


ಇನ್ನು ಶಂಕಿತ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಇಲಾಖೆಯ ಮಾಧ್ಯಮ ಬುಲೆಟಿನ್ ಹೇಳಿದೆ.


ರೋಗಿಯು ಮುಂಬೈ ಮೂಲದವನು ಎಂದು ವರದಿಯಾಗಿದೆ. ಅವರು ಮಾರ್ಚ್ 6 ರಂದು ಗ್ರೀಸ್‌ನಿಂದ ಮುಂಬೈಗೆ ಪ್ರಯಾಣ ಬೆಳೆಸಿದರು ಮತ್ತು ಮಾರ್ಚ್ 8 ರಂದು ವಿಮಾನದ ಮೂಲಕ ಬೆಂಗಳೂರಿಗೆ ಬಂದರು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಮಾರ್ಚ್ 9 ರಂದು ಅವರು ಕಚೇರಿಗೆ ಹೋಗಿದ್ದರು, ಈ ಸಮಯದಲ್ಲಿ ಅವರು ತಮ್ಮ ನಾಲ್ಕು ಆಪ್ತರೊಂದಿಗೆ ಮಾತನಾಡಿದ್ದರು ಮತ್ತು ಕೆಲವು ಗಂಟೆಗಳ ನಂತರ ಮನೆಗೆ ಹಿಂತಿರುಗಿದ್ದರು.


ಈ ವ್ಯಕ್ತಿ ಬೆಂಗಳೂರಿನಲ್ಲಿ ಪ್ರಯಾಣಿಸಲು ಆಟೋರಿಕ್ಷಾ ಬಳಸಿದ್ದಾನೆ ಎಂದು ವರದಿಯಾಗಿದೆ. ಚಾಲಕ ಮತ್ತು ಅವರ ಕುಟುಂಬದ ಮೂವರು ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.


ಭಾರತದಲ್ಲಿ 76 ಕರೋನವೈರಸ್ ಪ್ರಕರಣಗಳು ದೃಢಪಟ್ಟಿದೆ. ಪೋಷಕರೊಂದಿಗೆ ಇಟಲಿಗೆ ಪ್ರಯಾಣದ ಇತಿಹಾಸವನ್ನು ಹೊಂದಿರುವ ಕೇರಳದಲ್ಲಿ ಮೂರು ವರ್ಷದ ಮಗು ಸಹ ಧನಾತ್ಮಕ ಪರೀಕ್ಷೆಗೆ ಒಳಪಟ್ಟಿದೆ.


ಡಿಸೆಂಬರ್ 2019 ರಲ್ಲಿ, ಕರೋನವೈರಸ್ ಏಕಾಏಕಿ ಚೀನಾದ ವುಹಾನ್ ನಗರದಲ್ಲಿ ಮೊದಲು ವರದಿಯಾಗಿದೆ. ಈ ರೋಗವು 100 ಕ್ಕೂ ಹೆಚ್ಚು ದೇಶಗಳ ಮೇಲೆ ಪರಿಣಾಮ ಬೀರಿದೆ ಮತ್ತು ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.