ಚಾಮರಾಜನಗರ: ನಾಡಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಸಾಗಾಟ ನಡೆಸುವಾಗ ಪ್ರಾಧಿಕಾರದ ಬಸ್ ಚಾಲಕನೇ ಸಿಕ್ಕಿಬಿದ್ದಿದ್ದಾನೆ.


COMMERCIAL BREAK
SCROLL TO CONTINUE READING

ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಬಸ್ ಚಾಲಕ ರಾಜು ಎಂಬಾತ ಬಂಧಿತ ಆರೋಪಿ. ಬಸ್ ನಲ್ಲಿ ಕ್ಷೇತ್ರಕ್ಕೆ ಬೆಂಗಳೂರು, ಮೈಸೂರು, ಕೊಳ್ಳೇಗಾಲದಿಂದ ಭಕ್ತಾದಿಗಳನ್ನು ಕರೆತರುವ ಜೊತೆಗೆ ಅಕ್ರಮವಾಗಿ ಮದ್ಯ ಸಾಗಾಟ ನಡೆಸುತ್ತಿದ್ದನು. ಅಕ್ರಮ ಮದ್ಯ ಸಾಗಾಟದ ಖಚಿತ ಮಾಹಿತಿ ಮೇರೆಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ದಾಳಿ ನಡೆಸಿ ಮದ್ಯದ ಪೌಚುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ: Viral Video: ನಾನು ನಿಮಗೆ ಮತ ಹಾಕಿದ್ದೇನೆ, ಮದುವೆ ಮಾಡಿಸಿ! ಶಾಸಕರಿಗೆ ಬೇಡಿಕೆ ಇಟ್ಟ ವ್ಯಕ್ತಿ..!


ಚಾಲಕನ ವಿರುದ್ಧ  ಶಿಸ್ತು ಕ್ರಮ. ಕೈಗೊಳ್ಳುವಂತೆ ಪೊಲೀಸರು ಪ್ರಾಧಿಕಾರಕ್ಕೆ ಪತ್ರ ಕೂಡ ಬರೆದಿದ್ದಾರೆ. ದೀಪದ ಕೆಳಗೆ ಕತ್ತಲು ಎಂಬಂತೆ ಪ್ರಾಧಿಕಾರದ ಬಸ್ ನಲ್ಲೇ ಮದ್ಯ ಸಾಗಾಟ ನಡೆಸಿರುವುದಕ್ಕೆ ಭಕ್ತಾದಿಗಳು ಆಕ್ರೋಶ ಹೊರಹಾಕಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ