ಮಂಡ್ಯ: ಇತ್ತೀಚೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಸಂಭವಿಸಿದ್ದ ಬಸ್ ದುರಂತಕ್ಕೆ ಕಾರಣನಾದ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ನವೆಂಬರ್ 24 ರಂದು ಕನಗನಮರಡಿ ಸಮೀಪದ ವಿಸಿ ನಾಲೆಗೆ ಬಸ್‌ ಬಿದ್ದು 30 ಮಂದಿ ಧಾರುಣ ಸಾವನ್ನಪ್ಪಿದ್ದರು. ಆದರೆ ದುರಂತದ ಬಳಿಕ ಬಸ್ ತಲೆಮರೆಸಿಕೊಂಡಿದ್ದ ಬಸ್‌ ಚಾಲಕ ಶಿವಣ್ಣನನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 


ಚಾಲಕನ ಅಜಾಗರೂಕತೆಯಿಂದೆ ದುರಂತ ಸಂಭವಿಸಿದೆ, ಆತನನ್ನು ಕೂಡಲೇ ಬಂಧಿಸಬೇಕೆಂದು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಘಟನೆ ತಲೆಮರೆಸಿಕೊಂಡಿದ್ದ ಚಾಲಕನನ್ನು ಇಂದು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.