ಬೆಂಗಳೂರು: ಸಿಲಿಕಾನ್ ಸಿಟಿಯ ಅಂದಗೆಡಿಸುತ್ತಿರುವ ಪೋಸ್ಟರ್ ಹಾಗೂ ಗೋಡೆ ಬರಹಗಳನ್ನು ಭಾನುವಾರ ಸಂಜೆಯೊಳಗೆ ತೆರವುಗೊಳಿಸುವಂತೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಪೋಸ್ಟರ್ ತೆರವು ಕಾರ್ಯಾಚರಣೆ ಅಭಿಯಾನಕ್ಕಿಂದು ಚಾಲನೆ ನೀಡಿದರು.



COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ ಗಾಂಧಿನಗರದ ವೈ. ರಾಮಚಂದ್ರ ರಸ್ತೆಯಲ್ಲಿ ಆಡಳಿತ ಪಕ್ಷದ ನಾಯಕ ಎಂ. ಶಿವರಾಜ್ ಅವರೊಂದಿಗೆ ಸೇರಿ ಪೋಸ್ಟರ್ ಗಳನ್ನು ತೆರವುಗೊಳಿಸಿದ ಮೇಯರ್ ಸಂಪತ್ ರಾಜ್, 'ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಪೋಸ್ಟರ್ ಅಂಟಿಸಿದರೆ ಪೋಸ್ಟರ್ ಅಂಟಿಸುವವರ ವಿರುದ್ಧ ಪೋರ್ಟ್ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.