ಬೆಂಗಳೂರು : ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಶ್ರೀರಾಮುಲು ಅವರ ಪರಿಚಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೇಸರ ತೋಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸಿಎಂ ಯಡಿಯೂರಪ್ಪ(BS Yediyurappa) ಅವರ ಜೊತೆ ಮಾತುಕತೆಯಲ್ಲಿ ಶ್ರೀರಾಮುಲು, ನಿಮ್ಮ ವಿಜಯೇಂದ್ರರೇ ದೂರು ನೀಡಿದ್ದರಿಂದ, ನನ್ನ ಮನೆಗೆ ಬಂದು ಅರೆಸ್ಟ್ ಮಾಡಿದ್ದಾರೆ. ಇದನ್ನ ನಾನು ಹೇಗೆ ಸಹಿಸಬೇಕು? ನನ್ನ ಬಳಿ ಯಾಕೆ ಮೊದಲು ಚರ್ಚೆ ಮಾಡಲಿಲ್ಲ. ಇದರಿಂದ ನನ್ನ ಮರ್ಯಾದೆ ಹೋಗಿದೆ. ನಾನೇನಾದ್ರೂ ನಿಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ದೀನಾ? ಇಂದಿನವರೆಗೆ ನಾನು ನಿಮ್ಮ ಬಗ್ಗೆ ಮಾತನಾಡಿಲ್ಲ. ನನ್ನ ಪಾಡಿಗೆ ಇಲಾಖೆ ಕೆಲಸ ಮಾಡಿಕೊಂಡಿದ್ದೇನೆ. ಈ ರೀತಿ ಏಕಾಏಕಿ ನನ್ನ ಮರ್ಯಾದೆ ಹಾಳುಮಾಡಿದ್ರೆ ಹೇಗೆ? ನನ್ನ ಮೇಲೆ ಯಾಕಿಷ್ಟು ಬೇಸರ. ಮೊದಲು ನನ್ನ ಸಮಸ್ಯೆ ಸರಿಪಡಿಸಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದ್ದು ಬಂದಿದೆ.


ಇದನ್ನೂ ಓದಿ : Unlock 3.O : ರಾಜ್ಯಾದ್ಯಂತ ಜು. 5 ರಿಂದ ಅನ್ ಲಾಕ್ 3.O ಜಾರಿ : ಏನಿದೆ? ಏನಿಲ್ಲ?


ಇನ್ನು ಶ್ರೀರಾಮುಲು(B Sriramulu) ಅವರನ್ನು ಸಮಾಧಾನ ಪಡಿಸಿದ ಸಿಎಂ ಯಡಿಯೂರಪ್ಪ, ರಾಮುಲು ಅವರೇ ನೀವೇನು‌ ಬೇಜಾರಾಗಬೇಡಿ. ಸಮಸ್ಯೆ ಸರಿಪಡಿಸೋಣ ಬಿಡಿ ಎಂದಿದ್ದಾರೆ.


ಇದನ್ನೂ ಓದಿ : Heavy Rain in Karnataka : ಜುಲೈ 5ರವರೆಗೆ ರಾಜ್ಯದಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ


ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ(BY Vijayendra) ಅವರ ದೂರಿನ ಆಧಾರದ ಮೇಲೆ ಸಚಿವ ಶ್ರೀರಾಮುಲು ಪರಿಚಿತ ರಾಜು ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ : Heavy Rain : ರಾಜ್ಯಾದ್ಯಂತ ಇಂದು ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.