ಬೆಂಗಳೂರು: ಕೆಲಸವನ್ನು ಅರಸಿ ಬೆಂಗಳೂರಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಹೆಚ್ಚೆಚ್ಚು ಜನ ವಲಸೆ ಬಂದಿದ್ದರು. ಆದರೆ ಕರೋನಾವೈರಸ್ (Coronavirus) ದಾಳಿಯಿಂದ ಅವರೆಲ್ಲಾ ಬೆಂಗಳೂರಿನಲ್ಲಿ ಇರುವುದಕ್ಕೂ ಆಗದೆ ತಮ್ಮ ಊರುಗಳಿಗೆ ಹೋಗೋದಕ್ಕೂ ಆಗದೆ ಪರದಾಡುತ್ತಿದ್ದರು. 


COMMERCIAL BREAK
SCROLL TO CONTINUE READING

ಈಗ ಸರಕಾರ ವಲಸೆ ಕಾರ್ಮಿಕರ ಕಷ್ಟಗಳನ್ನರಿತು ಅವರಿಗೆ ತಮ್ಮ ಊರುಗಳಿಗೆ ಮರಳಬಹುದು ಎಂಬ ಸೂಚನೆಯನ್ನ ಕೊಟ್ಟಿದ್ದು ಬಡ ಕಾರ್ಮಿಕರಿಗಾಗೆ ಉಚಿತ ಬಸ್ ಸೇವೆಗಳನ್ನ ಮಾಡಿದೆ. ಹೇಗಾದರೂ ಸರಿ ಊರುಗಳಿಗೆ ಹೋಗಲೆ ಬೇಕು ಅಂತ ಏಣಿಕೆಗೂ ಸಿಗದಷ್ಟು ವಲಸಿಗರು ಊಟ, ತಿಂಡಿ ಬಿಟ್ಟು  ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಂದು ಕೂತಿದ್ದಾರೆ. ಅಂಥವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ‌ ಕೆ. ಗೋಪಾಲಯ್ಯ (K Gopalaiah)  ಸಹಾಯ ಹಸ್ತ ಚಾಚಿದ್ದಾರೆ.


ಮೆಜೆಸ್ಟಿಕ್ ನಲ್ಲಿ ಇದ್ದ ಸಾವಿರಾರು ವಲಸೆ ಕಾರ್ಮಿಕರ ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಊರಿಗೆ ಹೊರಟಿ ನಿಂತಿರುವ ಬಡ ಕಾರ್ಮಿಕರಿಗೆ ಉಚಿತ ಊಟ, ಬ್ರೆಡ್, ಬಿಸ್ಕೇಟ್, ನೀರನ್ನು ವಿತರಣೆ ಮಾಡಿದ್ದಾರೆ.‌ 


ಉಪಮುಖ್ಯ ಮಂತ್ರಿ ಲಕ್ಷಣ ಸವದಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ , ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಹಾಗೂ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ತಾರಾ ಅವರು ಬೆಂಗಳೂರಿನಿಂದ ಅವರ ತವರುಗಳತ್ತ ಹೋಗುತ್ತಿರುವ ಕಾರ್ಮಿಕರಿಗೆ ಬಸ್ ನಿಲ್ದಾಣದಲ್ಲಿ ಊಟ, ತಿಂಡಿ, ನೀರಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ.