ರಾಮನಗರ: ಕೇಂದ್ರ ಸರ್ಕಾರದ ನೀರಾವರಿ ಸಚಿವರು ತಕ್ಷಣ ಸಭೆ ಕರೆದು ಎನ್‌ಓಸಿ ಕ್ಲಿಯರೆನ್ಸ್ ಗೆ ಅಪ್ರುವಲ್ ಕೊಡಲಿ ಎಂದು ಸಂಸದ ಡಿ.ಕೆ‌. ಸುರೇಶ್ (DK Suresh) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Video:ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡ 19 ವರ್ಷದ ರೇಖಾ ಇಂದು YouTube ನಲ್ಲಿ One Leg Dancer


ಮೇಕೆದಾಟು (Mekedatu) ವಿಚಾರವಾಗಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವರ ಮಾತು ಆಶ್ವರ್ಯ ತರುತ್ತದೆ. ಬಾಲು ಅವರ ಬಳಿ ಇದೆ. ಅಧಿಕಾರ  ಅವರ ಹತ್ತಿರ ಇದೆ. ಚರ್ಚೆ ಮಾಡುವುದಾಗಿದ್ದರೆ ನಾವು ಯಾಕೆ ಅವರ ಬಳಿ ಹೋಗಬೇಕಿತ್ತು. ಕುಡಿಯುವ ನೀರಿಗೆ ಅನುಮೋದನೆ ಕೊಡಬೇಕಾಗಿದ್ದು ಕೇಂದ್ರ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.


ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸವನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿವೆ. ಒಂದೆಡೆ ಇನ್ನೊಂದು ವರ್ಷದಲ್ಲಿ ಚಾಲನೆ ಕೊಡುತ್ತೇವೆ ಎನ್ನುತ್ತಾರೆ. ಮತ್ತೊಂದೆಡೆ ಎರಡೂ ರಾಜ್ಯಗಳು ಮಾತನಾಡಿಕೊಳ್ಳಿ ಎನ್ನುತ್ತಾರೆ. ಈ ದ್ವಂದ್ವ ನೀತಿ ಸರಿಯಲ್ಲ ಎಂದರು.


ಇದನ್ನೂ ಓದಿ: women's world cup 2022 : ಪಾಕ್ ವಿರುದ್ಧ ಗೆದ್ದು ಬಿಗಿದಿ ಭಾರತ ಮಹಿಳಾ ಮಣಿಗಳು!


ತಮಿಳುನಾಡಿನ ನೀರಿನ ಪಾಲು ಕೊಡುವುದಾಗಿ ಸುಪ್ರೀಂಕೋರ್ಟ್ ನಲ್ಲಿ (Supreme Court) ನಾವು ಒಪ್ಪಿದ್ದೇವೆ. ಅನಾವಶ್ಯಕ ಗೊಂದಲವನ್ನ ರಾಜ್ಯದ ಜನರ ಮುಂದೆ ಇಡುವುದು ಬೇಡ. ತಮಿಳುನಾಡಿನವರ ಬಳಿ ಮಾತನಾಡುವ ಅವಶ್ಯಕತೆ ಇಲ್ಲ. ತಮಿಳುನಾಡಿನ ಬಳಿ ಕೇಂದ್ರದವರು ಮಾತನಾಡಲಿ. ಕರ್ನಾಟಕಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.