ಧಾರವಾಡ: ಧಾರವಾಡದ ಬಸವೇಶ್ವರ ನಗರ ನೂಲ್ವಿ ವಾಸಿ ದಿ ವೆಂಕಟರಾವ್ ಕುಲಕರ್ಣಿ ರವರು 2015 ರಲ್ಲ್ಲಿ ಎದುರುದಾರ ಐಶ್ವರ್ಯ ನ್ಯಾನೊ ಸಿಟಿ ಡೆವಲಪರ್ ಇವರೊಂದಿಗೆ ತಡಸಿನಕೊಪ್ಪದಲ್ಲಿ ನಿರ್ಮಿಸುತ್ತಿದ್ದ ಲೇಔಟ್‍ನಲ್ಲಿ ಪ್ಲಾಟ್ ನಂ.313 ನ್ನು ರೂ.440 ಚದರ ಪೂ. ನಂತೆ ಒಟ್ಟು ರೂ.5,28,000/-ಗೆ ಖರೀದಿಸಿದ್ದರು. ಈ ಬಗ್ಗೆ ಎದುರುದಾರ ನ್ಯಾನೊ ಸಿಟಿ ರವರು ಒಪ್ಪಂದ ಪತ್ರ ಮಾಡಿಕೊಟ್ಟಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Baba Vanga: 2024ರಲ್ಲಿ ಇಡೀ ಜಗತ್ತಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ! ಬಾಬಾ ವಂಗಾ ಭವಿಷ್ಯವೇನು?


ಮೃತರು ರೂ.3,16,800/- ಮುಂಗಡ ಹಣ ಪಾವತಿಸಿದ್ದರು. ಆದರೆ ಎದುರುದಾರರು ಒಪ್ಪಂದ ಪತ್ರದ ನಿಯಮಾವಳಿಗಳಂತೆ ಲೇಔಟ್ ಅಭಿವೃದ್ದಿ ಮಾಡಿರಲಿಲ್ಲ, ಹೀಗಿರುವಾಗ ದಿ.08/05/2021 ರಂದು ದೂರುದಾರರ ತಂದೆ ವೆಂಕಟರಾವ್ ಕುಲಕರ್ಣಿ ನಿಧನ ಹೊಂದಿದ್ದರು. ದೂರುದಾರರು ತಮ್ಮ ತಂದೆಯ ನಿಧನದ ಬಳಿಕ ಬಾಕಿ ಹಣ ಪಡೆದುಕೊಂಡು ತಮಗೆ ಪ್ಲಾಟ್ ನಂ.313 ರ ಖರೀದಿ ಪತ್ರ ಬರೆದುಕೊಡುವಂತೆ ಎದುರುದಾರ ನ್ಯಾನೊ ಸಿಟಿ ಸಂಸ್ಥೆಯ ಪಾಲುದಾರರಿಗೆ ವಿನಂತಿಸಿದ್ದರು. ಆದರೆ ಎದುರುದಾರರು ಒಂದಿಲ್ಲ ಒಂದು ರೀತಿಯ ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ದೂರುದಾರರು ದಿ.06/06/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ಇದನ್ನೂ ಓದಿ- Viral Video: ರೀಲ್ಸ್‌ಗಾಗಿ ಸಂಚಾರ ದಟ್ಟಣೆಯ ರಸ್ತೆಯಲ್ಲಿ ಯುವತಿಯ ಹುಚ್ಚಾಟ!


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದಸ್ಯರು, 2015 ರಲ್ಲಿ ದೂರುದಾರರ ತಂದೆ ದಿ.ವೆಂಕಟರಾವ್ ಕುಲಕರ್ಣಿ ರವರು ರೂ.3,16,800/- ಹಣ ಎದುರುದಾರರಿಗೆ ಕೊಟ್ಟಿದ್ದಾರೆ. ನಿಗದಿತ ಅವಧಿಯಲ್ಲಿ ಲೇಔಟ್ ಡೆವಲೆಪ್ ಮಾಡಿ ಪ್ಲಾಟ ನೋಂದಣಿ ಮಾಡಿಕೊಡಬೇಕು ಅಂತಾ ಕರಾರು ಇದೆ. ಆದರೆ ಎದುರುದಾರ ಐಶ್ವರ್ಯ ನ್ಯಾನೊ ಸಿಟಿ ಸಂಸ್ಥೆಯವರು ದೂರುದಾರರಿಗೆ ಅವರು ಒಪ್ಪಂದ ಮಾಡಿಕೊಂಡ ಪ್ಲಾಟ್ ನಂ.313 ರ ಖರೀದಿ ಪತ್ರ ಬರೆದು ಕೊಡದೇ ಅವರಿಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.


ದೂರುದಾರರು ಸಂದಾಯ ಮಾಡಿದ ರೂ.3,16,800/- ಜೊತೆಗೆ ಬಡ್ಡಿ ಹಣ ದಿ.31/12/2023 ವರೆಗೆ ರೂ.2,28,096/- ಸೇರಿಸಿ ದೂರುದಾರರಿಗೆ ಹಿಂದಿರುಗಿಸುವಂತೆ ಮತ್ತು ರೂ.3,16,800/- ಅದರ ಮೇಲೆ ದಿ.01/01/2024 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ 8% ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ಎಲ್ಲ ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎದುರುದಾರ ಐಶ್ವರ್ಯ ನ್ಯಾನೊ ಸಿಟಿ ಸಂಸ್ಥೆಯವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.