ಬೆಂಗಳೂರು: ಅಕ್ರಮ ಹಣ ಪತ್ತೆಯ ವಿಚಾರವಾಗಿ ಈಗ ಜಾರಿ ನಿರ್ದೆಶನಾಲಯದಿಂದ ಬಂಧನದ ಭೀತಿ ಎದುರಿಸುತ್ತಿರುವ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮಗೆ ಯಾವುದೇ ಭಯವಿಲ್ಲ ನಾನೇನು ಕ್ರಿಮಿನಲ್ ಅಲ್ಲ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಇನ್ನು ಮುಂದುವರೆದು ಪಾಲಿಟಿಕ್ಸ್ ಪುಟ್ಬಾಲ್ ಅಲ್ಲ ಇದೊಂದು ರೀತಿ ಚೆಸ್ ಗೇಮ್ ಎಂದು ತಮ್ಮ ಮೇಲೆ ಬರುತ್ತಿರುವ ಆರೋಪಗಳನ್ನು ಈ ರೀತಿಯಾಗಿ ವಾಖ್ಯಾನಿಸಿದರು.ಇದುವರೆಗೂ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಬಂದರೂ ಕೂಡ ತಾವು ಅದನ್ನು ಎದುರಿಸಲು ಸಿದ್ದ ಎಂದು ಡಿಕೆಸಿ ತಿಳಿಸಿದರು. 


ಈಗ ಡಿಕೆಸಿ ತಮ್ಮ ಮೇಲೆ ದಾಖಲಾಗುವ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಂತ್ರ ರೂಪಿಸಿದ್ದು ಅದಕ್ಕಾಗಿ ಅವರು ದೆಹಲಿಯಲ್ಲಿ ಹಿರಿಯ ವಕೀಲರಾದ  ಕಪಿಲ್ ಸಿಬಲ್ ಅಭಿಷೇಕ ಸಿಂಗ್ವಿ ಅವರನ್ನು ಭೇಟಿ ಮಾಡಿ ನಿರೀಕ್ಷಣಾ ಜಾಮೀನು ಪಡೆಯುವ ತಂತ್ರವನ್ನು ಸಹ ಹೆಣೆದಿದ್ದಾರೆ ಎನ್ನಲಾಗಿದೆ.