Special Tea For PM Narendra Modi in Bandipur:  ಇದೇ ಏಪ್ರಿಲ್ 09 ರಂದು ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ಕೊಡಲಿದ್ದು ಅರಣ್ಯ ಇಲಾಖೆ ಹಾಗೂ ಜನರು ಪ್ರಧಾನಿ ಮೋದಿಯವರನ್ನು ಕಾಣಲು ಹಾತೊರೆಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಅದೇ ರೀತಿ ಅರಣ್ಯ ಇಲಾಖೆಯು ವಿಶೇಷ ಎನಿಸುವ ಕೆಲ ಕಾರ್ಯಗಳನ್ನು ಮಾಡಲು ಮುಂದಾಗಿದ್ದು ಕಳ್ಳ ಬೇಟೆ ತಡೆ ಶಿಬಿರದಲ್ಲಿ ತಯಾರಿಸಲಾಗುವ ಕಡು ಕಪ್ಪು ಚಹಾದ ರುಚಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತೋರಿಸಲು ಅಧಿಕಾರಿಗಳು ಮುಂದಾಗಿದ್ದಾರೆ‌. 


ಇದನ್ನೂ ಓದಿ- ಬಂಡೀಪುರದಲ್ಲಿ ಹೈ ಅಲರ್ಟ್: ವಾಹನ ಸಂಚಾರ ನಿರ್ಬಂಧ- ಡ್ರೋನ್ ಹಾರಾಟವೂ ಬಂದ್!!


ಬಂಡೀಪುರಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿಯುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂದಾಜು 15 ಕಿಮೀ ಸಫಾರಿ ನಡೆಸಲಿದ್ದು  ದನ್ನಟ್ಟಿ ಹಳ್ಳ ಎಂಬ ಕ್ಯಾಂಪಿನಲ್ಲಿ ಅರಣ್ಯ ವೀಕ್ಷಕರು ವಿಶೇಷವಾಗಿ ಸೋಲಿಗರು ತಯಾರಿಸುವ ಕಪ್ಪು ಚಹಾವನ್ನು ಸೇವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 


ಇದನ್ನೂ ಓದಿ- ಎಎಪಿಗೆ ರಾಷ್ಟ್ರೀಯ ಸ್ಥಾನಮಾನ: ಏಪ್ರಿಲ್ 13 ರ ಮೊದಲು ಆದೇಶ ಹೊರಡಿಸಲು ಹೈಕೋರ್ಟ್ ಸೂಚನೆ


ಹಾಲು ಹಾಕದಿರುವ ಕಾಡಿನಲ್ಲೇ ಸಿಗುವ ಶುದ್ಧ ಜಲ, ನಿಂಬೆ ಹುಲ್ಲು, ಬೆಲ್ಲ ಹಾಕಿ ಮಾಡುವ ವಿಶೇಷ ಟೀಯನ್ನು ಮೋದಿ ಕುಡಿಯಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.