ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಮಹಿಳೆ ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಶಿರಾದ ಮಾಗೋಡು ಗೇಟ್ ಬಳಿ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಕೊಂಡಮ್ಮನಹಳ್ಳಿಯ ರಾಕೇಶ್, ಗುಳಿಗೇನಹಳ್ಳಿಯ ನಾಗರಾಜು ಸ್ಥಳದಲ್ಲೇ‌ ಪ್ರಾಣಬಿಟ್ಟಿದ್ದಾರೆ. ಮತ್ತೊಬ್ಬ ಸವಾರ ಪೃಥ್ವಿ ರಂಗ‌‌‌ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ: ಸ್ಪೋಟಕ ಮಾಹಿತಿ : ಉಗ್ರ ಶಾರಿಕ್‌ನ ಟಾರ್ಗೆಟ್‌ ಈ ನಗರಗಳು..!


ಮತ್ತೊಂದು ಪ್ರಕರಣದಲ್ಲಿ ಕಳ್ಳಂಬೆಳ್ಳ ಪೊಲೀಸ್ ಠಾಣೆ‌‌ ವ್ಯಾಪ್ತಿಯ ಬಾಲೇನಹಳ್ಳಿ ಗೇಟ್ ಬಳಿ ರಸ್ತೆ ದಾಟುತಿದ್ದ ಬಿಬಿಎಂಪಿ ಸಿಬ್ಬಂದಿ ಮಾಯಮ್ಮ ಸ್ಥಳದಲ್ಲೇ ‌ಸಾವನ್ನಪ್ಪಿದ್ದಾರೆ. ಮಾಯಮ್ಮ ಬಳ್ಳಾರಿಯ ಹಾಳೆಕೊಪ್ಪದ ನಿವಾಸಿಯಾಗಿದ್ದು, ಮೂತ್ರ ‌ವಿಸರ್ಜನೆಗೆ‌ ತೆರಳುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.


ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಚೆಪಾಳ್ಯದ ಬಳಿ ಕಾರು ಅಪಘಾತದಲ್ಲಿ ಬೆಂಗಳೂರಿನ ವಿಜಯನಗರದ ನರಸಿಂಹ (29) ಎಂಬುವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮನೋಜ್, ವಿಜಯ್ ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಿಂದ‌ ತುಮಕೂರು ತಾಲೂಕಿನ ಚಿಕ್ಕಣ್ಣಸ್ವಾಮಿ ದೇವಾಲಯ‌ ದರ್ಶನಕ್ಕೆ ಬರುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಸಿದ್ದರಾಮಯ್ಯ ಹಾಗೂ ಚಿಲುಮೆ ಸಂಸ್ಥೆಗೆ ಇರುವ ಸಂಬಂಧ ಏನು?: ಬಿಜೆಪಿ ಪ್ರಶ್ನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.