ಕಲಬುರ್ಗಿ: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಅನಂತ್ ಕುಮಾರ್ ನಿಧನ ದೊಡ್ಡ ದುರಂತ. ಮನಸ್ಸು, ಹೃದಯ ತುಂಬಾ ಭಾರವಾಗಿದೆ. ಪ್ರೀತಿಯ ಸ್ನೇಹಿತ, ಸಹೋದರ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ನಿಧನದಿಂದ ನನಗೆ ಅತ್ಯಂತ ದುಃಖವಾಗಿದೆ. 'ಅನಂತ್ ಕುಮಾರ್ ವ್ಯಕ್ತಿಯಲ್ಲ, ಓರ್ವ ಶಕ್ತಿಯಾಗಿದ್ದರು'. 3 ದಶಕಗಳಿಂದ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದೆ. ಪ್ರೀತಿಯ ಸ್ನೇಹಿತ, ಸಹೋದರ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ ಎಂದು ಗದ್ಗತಿತರಾಗಿ ನುಡಿದರು.