ಮೋದಿ ಕೆಲಸಗಳನ್ನು ಒಪ್ಪಿಕೊಳ್ಳದವರು ಹಾದರಕ್ಕೆ ಹುಟ್ಟಿದಂಗೆ : ಎಸ್.ಕೆ. ಬೆಳ್ಳುಬ್ಬಿ
9 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಮಾಡಿದ್ದಾರೆ. ಕಾಂಗ್ರೆಸ್ ನವರ ಮನೆಗೆ ಹೋಗಿ ಕೇಳಿ ಬೇಕಾದರೆ ಅಭಿವೃದ್ಧಿ ವಿಚಾರವಾಗಿ ಅವರು ಒಪ್ಪಿಕೊಳ್ಳುತ್ತಾರೆ. ಒಳ್ಳೆಯ ಕೆಲಸವನ್ನು ಒಪ್ಪಲೇ ಬೇಕು, ಒಪ್ಪದಿದ್ದರೆ ಅವರು ಮನುಷ್ಯರಲ್ಲ ರಾಕ್ಷಸರು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ವಿಜಯಪುರ : ಮೋದಿ ಕೆಲಸಗಳನ್ನು ಒಪ್ಪಿಕೊಳ್ಳದವರು ಹಾದರಕ್ಕೆ ಹುಟ್ಟಿದಂಗೆ, ಕಾಂಗ್ರೆಸ್ ನವರಿಗೆ ಹೋಗಿ ಕೇಳಿ ಅವರೂ ಒಪ್ಪಿಕೊಳ್ಳುತ್ತಾರೆ, ಒಪ್ಪಿಕೊಳ್ಳದವರು ಹಾದರಕ್ಕೆ ಹುಟ್ಟಿದಂಗೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ನಡೆದ ಬಿಜೆಪಿ ಪಕ್ಷದ ʼನನ್ನ ಮಣ್ಣು ನನ್ನ ದೇಶʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಎಸ್.ಕೆ ಬೆಳ್ಳುಬ್ಬಿ, ಮೋದಿ ಕೆಲಸಗಳನ್ನು ಒಪ್ಪಿಕೊಳ್ಳದವರು ಹಾದರಕ್ಕೆ ಹುಟ್ಟಿದಂಗೆ, ಕಾಂಗ್ರೆಸ್ ನವರಿಗೆ ಹೋಗಿ ಕೇಳಿ ಅವರೂ ಒಪ್ಪಿಕೊಳ್ಳುತ್ತಾರೆ, ಒಪ್ಪಿಕೊಳ್ಳದವರು ಹಾದರಕ್ಕೆ ಹುಟ್ಟಿದಂಗೆ ಎಂದು ಹೇಳಿದರು.
ಇದನ್ನೂ ಓದಿ: ಯಾವ ಪುರುಷಾರ್ಥಕ್ಕೆ ನೂರು ದಿನಗಳ ಸಂಭ್ರಮ ಎಂದು ಕಿಡಿ
ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಕಾಂಗ್ರೆಸ್ ನವರ ಮನೆಗೆ ಹೋಗಿ ಕೇಳಿ ಬೇಕಾದರೆ ಅಭಿವೃದ್ಧಿ ವಿಚಾರವಾಗಿ ಅವರು ಒಪ್ಪಿಕೊಳ್ಳುತ್ತಾರೆ. ಒಳ್ಳೆಯ ಕೆಲಸವನ್ನು ಒಪ್ಪಲೇಬೇಕು, ಒಪ್ಪದಿದ್ದರೆ ಅವರು ಮನುಷ್ಯರಲ್ಲ ರಾಕ್ಷಸರು, ಅವರು ಭಾರತ ಮಾತೆಯ ಮಕ್ಕಳಲ್ಲ ಹಾದರಕ್ಕೆ ಹುಟ್ಟಿದಂಗೆ ಎಂದು ಆಕ್ರೋಶ ಭರಿತ ನುಡಿಗನ್ನಾಡಿದರು.
ಅಲ್ಲದೆ, ಭಾರತ ಮಾತೆಗೆ ನಾವು ತಾಯಿ ಎಂದು ಕರೆಯುತ್ತೇವೆ. ತಾಯಿಗೆ ಅವಮಾನ ಮಾಡಿದವರು ಯಾರೇ ಇದ್ದರೂ ಅವರು ದೇಶದ್ರೋಹಿನೇ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಕಿಡಿಕಾರಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.