ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಪರಿಹಾರ ನೀಡದ ಜೀವ ವಿಮಾ ನಿಗಮಕ್ಕೆ ರೂ.6 ಲಕ್ಷಕ್ಕೂ ಹೆಚ್ಚು ಮೊತ್ತದ ದಂಡ ವಿಧಿಸಿ ದೂರುದಾರರಿಗೆ ಪರಿಹಾರ ನೀಡಲು ಆದೇಶ


COMMERCIAL BREAK
SCROLL TO CONTINUE READING

ಧಾರವಾಡ : ಹುಬ್ಬಳ್ಳಿಯ ಲಲಿತಾ ನಾಕೋಡ ಹಾಗೂ ಧಾರವಾಡದ ಪ್ರವೀಣ ಕಲ್ಲಟ್ಟಿ ಎಂಬುವವರು ಎದುರುದಾರ ಕರ್ನಾಟಕ ಬ್ಯಾಂಕ್ ಮತ್ತು ಜೀವ ವಿಮಾ ನಿಗಮದ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದರು. ಆ ದೂರಿನಲ್ಲಿ ಅವರು ತಮಗೆ ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯನ್ವಯ ಬರಬೇಕಾದ ಮೊತ್ತವನ್ನು ಕೊಡದೇ ಸತಾಯಿಸುತ್ತಿದ್ದಾರೆ ಎಂದು ದೂರಿದ್ದರು. ಎದುರುದಾರರ ಈ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದೂರುದಾರರು ದಿ:02/01/2023 ರಂದು ಮತ್ತು ದಿ:29/03/2023 ರಂದು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ಪ್ರತ್ಯೇಕ ಫಿರ್ಯಾದುಗಳನ್ನು ಸಲ್ಲಿಸಿದ್ದರು.


1ನೇ ಪ್ರಕರಣದಲ್ಲಿ ಲಲಿತಾ ಅವರ ಪತಿ ರಮೇಶ ನಾಕೋಡ ಎದುರುದಾರ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು ಮತ್ತು ಸದರಿ PMJJBY ಸ್ಕೀಮಿನಲ್ಲಿ 2015 ರಲ್ಲೇ ತಮ್ಮ ಹೆಸರನ್ನು ನೋಂದಾಯಿಸಿ ಎದುರುದಾರರ ಬ್ಯಾಂಕಿನವರು ಪ್ರತಿ ವರ್ಷ ಪ್ರಿಮಿಯಮ್ ಹಣ ರೂ.330/- ಕಡಿತ ಮಾಡಿಕೊಂಡಿದ್ದರು. ದೂರುದಾರರ ಪತಿ ರಮೇಶ ನಾಕೋಡ ದಿ:22/04/2021 ರಂದು ಮೃತ ಪಟ್ಟಿದ್ದರು. ಅದೇ ರೀತಿ 2ನೇ ದೂರುದಾರ ಪ್ರವೀಣ ಕಲ್ಲಟ್ಟಿ ಅವರ ತಾಯಿ ಎದುರುದಾರ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ಸದರಿ PMJJBY ಸ್ಕೀಮಿನಲ್ಲಿ 2015 ರಲ್ಲೇ ತಮ್ಮ ಹೆಸರನ್ನು ನೋಂದಾಯಿಸಿ ಎದುರುದಾರರ ಬ್ಯಾಂಕಿನವರು ಪ್ರತಿ ವರ್ಷ ಪ್ರಿಮಿಯಮ್ ಹಣ ರೂ.330/- ಕಡಿತ ಮಾಡಿಕೊಂಡಿದ್ದರು. ದೂರುದಾರರ ತಾಯಿ ಅಮ್ರಿತಾ ಕಲ್ಲಟ್ಟಿ ದಿ:24/11/2020 ರಂದು ಮೃತ ಪಟ್ಟಿದ್ದರು. ಇಬ್ಬರೂ ವಿಮಾದಾರರು ಸತ್ತ ಮೇಲೆ ಅವರಿಗೆ ಸಂಬಂಧಿಸಿದ ತಲಾರೂ. 2 ಲಕ್ಷ ವಿಮಾ ಮೊತ್ತವನ್ನು ಎದುರುದಾರ ಬ್ಯಾಂಕ್ ಹಾಗೂ ಎಲ್.ಆಯ್.ಸಿ.ಆಪ್ ಇಂಡಿಯಾದವರು ವಿಮಾ ಮೊತ್ತವನ್ನು ಕೊಡದೇ ನಿರ್ಲಕ್ಷಿಸಿದ್ದಾರೆ ಅಂತಾ ತಮ್ಮ ದೂರಿನಲ್ಲಿ ಕಾಣಿಸಿದ್ದರು.


ಇದನ್ನೂ ಓದಿ: ಹೃದಯ ಆರೋಗ್ಯ ಕೆಟ್ಟರೆ ಹೀಗಿರುತ್ತೆ ಮುನ್ಸೂಚನೆ


ಸದರಿ ದೂರುಗಳಿಗೆ ಆಕ್ಷೇಪಣೆ ಎತ್ತಿದ ಕರ್ನಾಟಕ ಬ್ಯಾಂಕ್‍ತಮ್ಮಿಂದ ದೂರುದಾರರಿಗೆ ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲ ನಾವು ನಿಯಮಿತವಾಗಿ ದೂರುದಾರರ ಸಂಬಂಧಿಗಳ ಮೃತರ ಬ್ಯಾಂಕ್ ಖಾತೆಯಿಂದ PMJJBY ಯೋಜನೆಯ ವಿಮಾ ಮೊತ್ತ ರೂ.330/- ಕಡಿತಗೊಳಿಸಿ ಎಲ್.ಆಯ್.ಸಿ.ಆಪ್ ಇಂಡಿಯಾ ಇವರಿಗೆ ದಿ:02/01/2020 ರಂದು ವರ್ಗಾಯಿಸಿರುವುದಾಗಿ ಹೇಳಿ ತಮ್ಮ ಮೇಲಿನ ದೂರನ್ನು ವಜಾ ಮಾಡುವಂತೆ ಆಕ್ಷೇಪಿಸಿದ್ದರು. ಅದೇ ರೀತಿ ಎದುರುದಾರ/ ಎಲ್.ಆಯ್.ಸಿ. ಅವರು ಸದರಿ ದೂರುಗಳಿಗೆ ಆಕ್ಷೇಪಣೆ ಎತ್ತಿ PMJJBY ಯೋಜನೆಯ ಅಡಿ ಬ್ಯಾಂಕಿನವರು ವಿಮಾ ಮೊತ್ತ ರೂ.330/- ಪಾವತಿಸಲು ಪ್ರತಿ ವರ್ಷ ಜೂನ್-1 ನೇ ತಾರೀಖು ಅಂತಿಮ ದಿನವಾಗಿರುತ್ತದೆ. ಆದರೆ ಈ 2 ಪ್ರಕರಣಗಳಲ್ಲಿ ವಿಮಾ ಮೊತ್ತವನ್ನು 1ನೇ ತಾರೀಖಿನ ಬದಲು ಜೂನ್ 2ನೇ ತಾರೀಖು ಬ್ಯಾಂಕಿನವರು ಪಾವತಿಸಿದ್ದು ಅದು ತಡವಾಗಿರುವ ಕಾರಣ ತಾವು ವಿಮೆ ಹಣಕೊಡಲು ಬದ್ದರಲ್ಲ ಅಂತಾ ವಿಮಾ ಕಂಪನಿಯವರು ಆಕ್ಷೇಪಿಸಿದ್ದರು.


ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ಮೇಲಿನ ಎರಡು ಪ್ರಕರಣಗಳಲ್ಲಿ ದೂರುದಾರರ ಸಂಬಂಧಿಕರ ಉಳಿತಾಯ ಖಾತೆಯಿಂದ ಪ್ರತಿ ವರ್ಷ PMJJBY ಯೋಜನೆಯ ವಿಮೆ ಮೊತ್ತ ಪಡೆದುಕೊಂಡು ಅವರ ನಿಧನದ ನಂತರ ವಿಮಾ ಮೊತ್ತವನ್ನು ಪಾವತಿಸುವುದು ಎದುರುದಾರ/ಎಲ್.ಆಯ್.ಸಿ.ಅವರ ಕಾನೂನು ಬದ್ಧ ಕರ್ತವ್ಯವಾಗಿರುತ್ತದೆ. ಸದರಿ ಬ್ಯಾಂಕು ಮತ್ತು ಜೀವ ವಿಮಾ ನಿಗಮದ ನಡುವೆ ಆಗಿರುವ ಒಪ್ಪಂದ ಪ್ರಕಾರ ಪ್ರತಿ ವರ್ಷ ಜೂನ್-30 ರೊಳಗಾಗಿ ಬ್ಯಾಂಕಿನವರು ಪ್ರಿಮಿಯಮ್ ಮೊತ್ತವನ್ನು ವಿಮಾ ಕಂಪನಿಗೆ ಕಳಿಸಬೇಕು ಅಂತಾ ಒಡಂಬಡಿಕೆಯಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಜೂನ್-2ನೇ ತಾರೀಖು ಬ್ಯಾಂಕಿನವರು ವಿಮಾ ಕಂಪನಿಗೆ ವಿಮಾ ಪ್ರಿಮಿಯಮ್ ಹಣ ಕಳಿಸಿದ್ದಾರೆ ಅದರು ನಿಯಮ ಬದ್ಧವಾಗಿದೆ. ಕಾರಣ ತಲಾ ರೂ.2 ಲಕ್ಷ ವಿಮಾ ಮೊತ್ತದ ಹಣ ವಿಮಾದಾರರಿಗೆ ಕೊಡಲು ಜೀವವಿಮಾ ನಿಗಮದವರು ಬದ್ಧರಿದ್ದಾರೆ. ಆದರೆ ಅವರು ಆ ವಿಮಾ ಹಣ ನೀಡದೇ ದೂರುದಾರರಿಗೆ ಸತಾಯಿಸುತ್ತಿರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.


ಇದನ್ನೂ ಓದಿ: ಕುರಿಗಳಿಗೆ ವೈರಸ್: ಗುಂಡ್ಲುಪೇಟೆಯಲ್ಲಿ 30 ಕ್ಕೂ ಹೆಚ್ಚು ಕುರಿ ಬಲಿ


ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಇಬ್ಬರೂ ದೂರುದಾರರಿಗೆ ತಲಾ 2 ಲಕ್ಷ ರೂಪಾಯಿ ವಿಮಾ ಮೊತ್ತ ಮತ್ತು ಅವರ ವಿಮಾ ಅರ್ಜಿ ತಿರಸ್ಕಾರ ಮಾಡಿದ ದಿನಾಂಕದಿಂದ ಪೂರ್ತಿ ಹಣ ಸಂದಾಯ ಮಾಡುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಒಬ್ಬರಿಗೆ ರೂ.2,37,332/- ಮತ್ತು ಇನ್ನೊಬ್ಬ ದೂರುದಾರನಿಗೆ ರೂ.2.43,997/- ನೀಡುವಂತೆ ಜೀವ ವಿಮಾ ನಿಗಮಕ್ಕೆ ಆಯೋಗ ನಿರ್ದೇಶಿಸಿದೆ. ಇಬ್ಬರೂ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ತಲಾ ರೂ.50,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ತಲಾ ರೂ.10,000/- ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಎದುರುದಾರ ಎಲ್.ಆಯ್.ಸಿ.ಗೆ ಆಯೋಗ ಆದೇಶಿಸಿದೆ. ಎರಡು ಪ್ರಕರಣಗಳಲ್ಲಿ ಎದುರುದಾರ ಕರ್ನಾಟಕ ಬ್ಯಾಂಕ್ ವಿರುದ್ಧದ ದೂರನ್ನು ವಜಾಗೊಳಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.