ಬೆಂಗಳೂರು: ವಿಧಾನ ಸೌಧಕ್ಕೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಕ್ಟೋಬರ್ 6 ಮತ್ತು 7 ನೇ ತಾರೀಖಿನಂದು ಆಯೋಜಿಸಿದ್ದ ವಜ್ರಮಹೊತ್ಸವವನ್ನು ಮುಂದೂಡಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ವಿಧಾನ ಸೌಧದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಟಿ.ಬಿ. ಜಯಚಂದ್ರ, ಕಾರ್ಯಕ್ರಮಕ್ಕೆ ಆಗಮಿಸ ಬೇಕಿರುವ ರಾಷ್ಟ್ರಪತಿಗಳು ದಿನಾಂಕ ನಿಗದಿ ಪಡಿಸಿಲ್ಲದ ಕಾರಣ ವಜ್ರಮಹೋತ್ಸವದ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.