ಬೆಂಗಳೂರು: ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ, ನೇರವಾಗಿ, ಧೈರ್ಯದಿಂದ ಸತ್ಯ ಹೇಳುವುದು ಕಷ್ಟವಾಗಿದೆ.ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿದರೆ ಅವರಿಗೆ ಕಹಿಯಾಗಿ ಕಾಣುತ್ತದೆ.ಇದಕ್ಕೆ ಕಾರಣ ಅವರ ವಕ್ರಕಣ್ಣುಗಳು. ಇದಕ್ಕೆ ಹೆದರದೆ ಪ್ರತಿಯೊಬ್ಬ ಪ್ರಜೆಯೂ ಸತ್ಯವನ್ನು ಧೈರ್ಯದಿಂದ ಹೇಳಲು ಮುಂದಾಗಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.


South Africa vs India, 1st Test: ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಶತಕ, ಸುಸ್ಥಿತಿಯಲ್ಲಿ ಭಾರತ ತಂಡ


COMMERCIAL BREAK
SCROLL TO CONTINUE READING

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇಕಡಾ ಹನ್ನೆರಡರಷ್ಟು ಸಾಕ್ಷರರಿದ್ದರು, ಈಗ ಶೇಕಡಾ 78ರಷ್ಟು ಸಾಕ್ಷರರಾಗಿದ್ದಾರೆ. ಶಿಕ್ಷಣ ಹೆಚ್ಚಿದಷ್ಟೂ ನಮ್ಮಲ್ಲಿ ಮೌಢ್ಯ, ಅಂಧಶ್ರದ್ದೆಗಳೆಲ್ಲ ಹೆಚ್ಚಾಗುತ್ತಿದೆ. ಶಿಕ್ಷಣ ನಮ್ಮಲ್ಲಿ ವೈಚಾರಿಕತೆಯನ್ನು ಬೆಳೆಸದೆ ಇರುವುದೇ ಇದಕ್ಕೆ ಕಾರಣ.ಸತ್ಯ ಹೇಳುವವರನ್ನು ದೇಶದ್ರೋಹಿಗಳು, ಭಯೋತ್ಪಾದಕರೆಂದು ಆರೋಪಿಸುತ್ತಾರೆ. ಮಹಾತ್ಮ ಗಾಂಧಿಯನ್ನು ಕೊಂದವರನ್ನು ಗುಡಿ ಕಟ್ಟಿ ಪೂಜೆ ಮಾಡುತ್ತಾರೆ. ವಿಚಾರವಂತರೆಲ್ಲರೂ ಇದನ್ನು ವಿರೋಧಿಸದೆ ಹೋದರೆ  ಸಂವಿಧಾನವೂ ಉಳಿಯುವುದಿಲ್ಲ, ದೇಶವೂ ಉಳಿಯುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.


South Africa vs India, 1st Test: ಹರಿಣಗಳ ನಾಡಿನಲ್ಲಿ ಅಬ್ಬರಿಸಿದ ಕನ್ನಡಿಗದ್ವಯರು ..!


ಇತ್ತೀಚೆಗೆ ಬೌದ್ಧ, ಜೈನ, ಲಿಂಗಾಯತ, ಸಿಖ್ ಧರ್ಮಗಳೆಲ್ಲ ಹಿಂದೂ ಧರ್ಮದ ಭಾಗ ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ. ಈ ಧರ್ಮಗಳು ವೈದಿಕ ಧರ್ಮಕ್ಕೆ ಪರ್ಯಾಯ ಎನ್ನುವುದನ್ನು ಮರೆಮಾಚಲು ಈ ಕುತಂತ್ರ ಮಾಡಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. 
ಬುದ್ದ, ಬಸವಣ್ಣನವರು ವೈದಿಕತೆಯನ್ನು ಒಪ್ಪಿಕೊಂಡವರೇ? ಅವರು ಅಂಧಶ್ರದ್ದೆ, ಗೊಡ್ಡು ಸಂಪ್ರದಾಯಗಳನ್ನು ಬೆಂಬಲಿಸಿದ್ದಾರೆಯೇ? ಬುದ್ದ, ಬಸವಣ್ಣನವರು ಸ್ಥಾಪಿಸಿದ್ದ ಧರ್ಮಗಳು ಹಿಂದೂ ಧರ್ಮದ ಭಾಗ ಎನ್ನುವವರು, ಅವರು ಪ್ರತಿಪಾದಿಸಿದ್ದ ವಿಚಾರಗಳನ್ನು ಒಪ್ಪಿಕೊಳ್ಳುತ್ತಾರೆಯೇ. ಎಂದು ಅವರು ಪ್ರಶ್ನಿಸಿದರು.


ಇದನ್ನೂ ಓದಿ: WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್


ಆತ್ಮಕತೆಗಳು ಸ್ವಯಂ ವೈಭವೀಕರಣ ಆಗಬಾರದು, ಅದು ಆತ್ಮಾವಲೋಕನ ಮಾಡಿಕೊಳ್ಳಬೇಕು.ಸಾಹಿತಿ ಎಸ್.ಜಿ.ಸಿದ್ದರಾಮಯ್ಯನವರ ಆತ್ಮಕಥನದಲ್ಲಿ ಆತ್ಮವಿಮರ್ಶೆಯ ಗುಣಗಳಿವೆ.ಇದು ಕೇವಲ ಅವರ ವೈಯಕ್ತಿಕ ಕಥನವಾಗದೆ ಸಮಾಜದ ಕಥನವಾಗಿದೆ ಎಂದು ಹೇಳಿದರು.


ಇದನ್ನೂ ಓದಿ: WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.