ಬೆಂಗಳೂರು: ಎಲ್ಲ ಅಭಿಮಾನಿಗಳ ಹೃದಯದಲ್ಲಿ ವಿಷ್ಣು ಸ್ಮಾರಕವಿದೆ.ಆದ್ದರಿಂದ ಅಭಿಮಾನಿಗಳ ಪ್ರೀತಿ ಅಷ್ಟೇ ಸಾಕು ಎಂದು ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಜೆಪಿ ನಗರದಲ್ಲಿರುವ ಸ್ವಗೃಹದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್ " ನಾವು ಏನು ಮಾಡಿದರೂ ಸ್ಮಾರಕ ನಿರ್ಮಾಣವಾಗಲಿಲ್ಲ ಆದ್ದರಿಂದ ವಿಷ್ಣುವರ್ಧನ್ ಅವರಿಗೆ ಇಷ್ಟವಾಗಿದ್ದ ಮೈಸೂರಿಗೆ ಹೋಗಿದ್ದು, ನಮಗೆ ಸ್ಮಾರಕ ನಿರ್ಮಾಣವಾದ್ರು ಸಂತೋಷ ಇಲ್ಲದ್ದಿದರೆ ನಮಗೇನೂ ಅಸಮಾಧಾನವಿಲ್ಲ ಯಾವುದಕ್ಕೂ ನಾವು ವಾದ ಮಾಡಲು ಹೋಗುವುದಿಲ್ಲ ಒಂದು ವೇಳೆ ಬೆಂಗಳೂರಿನಲ್ಲಿ ಸ್ಮಾರಕ ಮಾಡುವುದಾದರೆ ಅಭಿಮಾನ ಸ್ಟುಡಿಯೋದಲ್ಲಿ ಮಾಡಿ ಇಲ್ಲದಿದ್ದರೆ ಮೈಸೂರಿನಲ್ಲಿ ನಿರ್ಮಿಸಿ" ಎಂದು ಆಗ್ರಹಿಸಿದರು. 


ವಿಷ್ಣು ಅವರಿಗೆ ಅಭಿಮಾನಿಗಳ ಹೃದಯದಲ್ಲಿ ಸ್ಮಾರಕವಿದೆ ಅದಿಷ್ಟೇ ಸಾಕು ನಿಮ್ಮನ್ನು ನೋಯಿಸುವ ಯಾವ ಉದ್ದೇಶವು ಕೂಡ ನಮ್ಮದಲ್ಲ. ಎಲ್ಲಕ್ಕೂ ಮಿಗಿಲಾಗಿ ವಿಷ್ಣು ಯಾವುದಕ್ಕೂ ಕೂಡ ಆಸೆ ಪಟ್ಟವರಲ್ಲ.ಅಭಿಮಾನಿಗಳು ನಮ್ಮ ಜೊತೆ ಯಾವತ್ತೋ ಇದ್ದಾರೆ ಆದ್ದರಿಂದ ಅವರ ಪ್ರೀತಿ ಅಷ್ಟೇ ಸಾಕು ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದರು.