Crime : ಬೆಂಗಳೂರಿನಲ್ಲಿ ಸ್ವಂತ ಚಿಕ್ಕಪ್ಪನಿಂದಲೇ ಮಗನ ಕೊಲೆಯಾಗಿದೆ. ಕೆಂಗೇರಿಯ ಹೊಯ್ಸಳ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಘಟನೆಗೆ ಕಾರಣ ಕೇಳಿದ್ರೆ ಶಾಕ್ ಆಗುತ್ತೆ. ಕೊಲೆಯಾದ ವ್ಯಕ್ತಿ ನವೀನ್. ಕೊಲೆ ಮಾಡಿದವ ಸ್ವಂತ ಚಿಕ್ಕಪ್ಪ ಕುಮಾರ್. ನವೀನ್ ಕುಡಿದಾಗ ನನಗೆ ಮರ್ಯಾದೆ ಕೊಡಲ್ಲ ಎಂಬ ಹಳೆ ದ್ವೇಷ ಇಟ್ಕೊಂಡು ನಿನ್ನೆ ರಾತ್ರಿ, ಕೆಂಗೇರಿ ಉಪನಗರದ ಹ್ಯಾಪಿ ಡೇ  ಬಾರ್ ಸಮೀಪ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾನೆ.


COMMERCIAL BREAK
SCROLL TO CONTINUE READING

ಕುಡಿದು ಮರ್ಯಾದೆ ಕೊಡದ ಹಾಗೆ ಮಾತನಾಡ್ತಿದ್ದ ನವೀನ್ ಮೇಲೆ, ಚಿಕ್ಕಪ್ಪ ಕುಮಾರ್ ದ್ವೇಷ ಬೆಳಸಿಕೊಂಡಿದ್ದ. ನಿನ್ನೆ ಸಂಜೆ ತನ್ನ ಸ್ನೇಹಿತರ ಜೊತೆ ಹ್ಯಾಪಿ ಡೇ ಬಾರ್ ಗೆ ಬಂದಿದ್ದ ಕುಮಾರ್, ಕಂಠಪೂರ್ತಿ ಕುಡಿದ ಬಳಿಕ, ನವೀನ್‌ನನ್ನ ಬಾರ್ ಬಳಿಗೆ ಕರೆಸಿಕೊಂಡು, ಎಣ್ಣೆ ಕುಡಿಸಿದ್ದಾನೆ. ಬಳಿಕ ಜಗಳ ತೆಗೆದ ಕುಮಾರ್,  ಬಾರ್ ಪಕ್ಕದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 


ಇದನ್ನೂ ಓದಿ-ಪಾಲಿಕೆಯಲ್ಲಿಲ್ಲ ವಾರ್ಡ್ ಸಮಿತಿ: ಸ್ಥಳೀಯರ ಅಹವಾಲು ಆಲಿಸುವವರೇ ಇಲ್ಲ...!


 ವೇಳೆ ತನ್ನ ಕಾಲಿಗೂ ಗಾಯ ಆಗಿದ್ದು, ರಕ್ತಸ್ರಾವ ಆಗ್ತಿದ್ರೂ ಒಂದು ಕಿಲೋಮೀಟರ್ ದೂರ ಓಡಿ ಹೋಗಿ ಸುಸ್ತಾಗಿ ಬಿದ್ದಿದ್ದಾನೆ. ರಕ್ತದ ಗುರುತಿನ ಹೆಜ್ಜೆಗಳನ್ನ ಆಧಾರಿಸಿ ಹೋದ ಪೊಲೀಸರಿಗೆ ಆರೋಪಿ ಸಿಕ್ಕಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ್ದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷಣ್ ನಿಂಬರಗಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದರು. 


ಪ್ರಕರಣವನ್ನ ದಾಖಲಿಸಿಕೊಂಡಿರೋ ಕೆಂಗೇರಿ ಪೊಲೀಸರು, ಉಳಿದ ಆರೋಪಿಗಳಿಗಾಗಿ ತಲಾಶ್ ನಡೆಸ್ತಿದ್ದಾರೆ. ಸದ್ಯ ನವೀನ್ ಮೃತದೇಹವನ್ನು ಆರ್ ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,  ಬಾರ್ ನ ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ


ಇದನ್ನೂ ಓದಿ-Good News: ಜುಲೈ ಅಂತ್ಯದ ವೇಳೆಗೆ ರಾಜ್ಯಕ್ಕೆ ಮತ್ತೊಂದು ‘ವಂದೇ ಭಾರತ್’ ರೈಲು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.