ಬೆಂಗಳೂರು : Astro Tips for Money and Popularity: ಜೀವನದಲ್ಲಿ ಯಶಸ್ಸು, ಖ್ಯಾತಿ ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಆದರೆ ಕೆಲವೊಮ್ಮೆ ಅದೆಷ್ಟೋ ಪ್ರಯತ್ನ ಪಟ್ಟರೂ ನಿರೀಕ್ಷಿಸಿದ ಯಶಸ್ಸು ಸಿಗುವುದೇ ಇಲ್ಲ. ಹೀಗಾದಾಗ ಇದಕ್ಕೆ ಗ್ರಹಗಳ ಸ್ಥಿತಿಯು ಕೂಡಾ ಕಾರಣವಾಗಿರಬಹುದು.  ಒಂದು ಗ್ರಹದಿಂದ ಯಾವುದೇ ಉತ್ತಮ ವೃತ್ತಿಜೀವನವು ಸಂಪೂರ್ಣವಾಗಿ ನಿರ್ಮಾಣವಾಗುವುದಿಲ್ಲ. ಅನೇಕ ಗ್ರಹಗಳ ಸಹಕಾರ ಕಂಡುಬಂದಾಗ, ವ್ಯಕ್ತಿಗೆ ಖ್ಯಾತಿ ಸಿಗುತ್ತದೆ. ಆದ್ದರಿಂದ ಪ್ರತಿ ಗ್ರಹಡ ಕೃಪೆಗೆ ಪಾತ್ರರಾಗುವುದು ಅವಶ್ಯಕವಾಗಿದೆ. 


COMMERCIAL BREAK
SCROLL TO CONTINUE READING

ಗ್ರಹಗಳನ್ನು ಹೇಗೆ ಮೆಚ್ಚಿಸುವುದು ? 
ಸೂರ್ಯ :  ಸೂರ್ಯನ ಆಶೀರ್ವಾದ ಪಡೆಯಲು ತಾಮ್ರದ ಪಾತ್ರೆಯಲ್ಲಿ ನೀರನ್ನು ಸೇವಿಸಬೇಕು. ಏಲಕ್ಕಿಯ ಸೇವನೆಯಿಂದಲೂ  ಸೂರ್ಯದೇವ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ಇದೆ. ಜೇಬಿನಲ್ಲಿ ಕೆಂಪು ಕರವಸ್ತ್ರ ಇಟ್ಟುಕೊಂಡರೆ ಸೂರ್ಯದೇವನ ಕರುಣೆಯೂ ಸಿಗುತ್ತದೆ. ಭಾನುವಾರದಂದು ಕೆಂಪು ಬಟ್ಟೆಗಳನ್ನು ಧರಿಸುವುದರಿಂದ ಸೂರ್ಯನು ಪ್ರಸನ್ನನಾಗುತ್ತಾನೆ.  


ಚಂದ್ರ: ಕೆನೆ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಚಂದ್ರನ ಶುಭ ಪರಿಣಾಮಗಳ ಹರಿವು ಹೆಚ್ಚಾಗುತ್ತದೆ. ಮತ್ತೊಂದೆಡೆ, ಬೆಳ್ಳಿಯ ಪಾತ್ರೆಗಳನ್ನು ಬಳಸುವುದರಿಂದ, ಚಂದ್ರ ದೇವರ ಅನುಗ್ರಹವನ್ನು ಪಡೆಯಲಾಗುತ್ತದೆ. ಜೇಬಿನಲ್ಲಿ ಬಿಳಿ ಬಣ್ಣದ ಕರವಸ್ತ್ರವನ್ನೂ ಇಟ್ಟುಕೊಳ್ಳಬೇಕು. 


ಇದನ್ನೂ ಓದಿ : ಈ ತಿಂಗಳಲ್ಲಿ ಜನಿಸಿದವರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ!


ಮಂಗಳ: ಮಂಗಳನ ಆಶೀರ್ವಾದ ಪಡೆಯಲು ತಾಮ್ರದ ಪಾತ್ರೆಗಳನ್ನು ಬಳಸಬೇಕು. ಪ್ರಕಾಶಮಾನವಾದ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮಂಗಳನು ಸಂತೋಷಗೊಳ್ಳುತ್ತಾನೆ. ಅಲ್ಲದೆ, ಜೇಬಿನಲ್ಲಿ ಕೆಂಪು ಕರವಸ್ತ್ರವನ್ನು ಮಾತ್ರ ಇಟ್ಟುಕೊಳ್ಳಬೇಕು. ಹಣೆಗೆ ಕೆಂಪು ತಿಲಕವನ್ನು ಹಚ್ಚಿಕೊಂಡರೆ ಮಂಗಳನ ಕೃಪೆಯೂ ದೊರೆಯುತ್ತದೆ. 


ಬುಧ : ಬುಧನ ಆಶೀರ್ವಾದ ಪಡೆಯಲು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಇದರೊಂದಿಗೆ, ಜೇಬಿನಲ್ಲಿ ಹಸಿರು ಕರವಸ್ತ್ರ ಅಥವಾ ಯಾವುದೇ ಸಣ್ಣ ಹಸಿರು ಬಟ್ಟೆಯನ್ನು ಇಟ್ಟುಕೊಳ್ಳಿ.  ಬುಧವು ಪ್ರಬಲವಾಗಿದ್ದರೆ, ವ್ಯಕ್ತಿಯು ಬುದ್ಧಿವಂತಿಕೆಯ ಬಲದ ಮೇಲೆ ತನ್ನ ಕ್ಷೇತ್ರದಲ್ಲಿ ಯಶಸ್ಸು ಹೊಂದುವುದು ಸಾಧ್ಯವಾಗುತ್ತದೆ. 


ಗುರು  : ಗುರುವನ್ನು ಮೆಚ್ಚಿಸಲು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಹಳದಿ ಬಣ್ಣದ ಕರವಸ್ತ್ರವನ್ನು ಜೇಬಿನಲ್ಲಿ ಇರಿಸಿಕೊಳ್ಳಬೇಕು. ಹಳದಿ ಹೂವುಗಳ ಮಾಲೆಯನ್ನು ಧರಿಸುವುದು ಸಹ ಪ್ರಯೋಜನಕಾರಿಯಾಗಿದೆ. ಪ್ರತಿ ಗುರುವಾರದಂದು ಕುಂಕುಮ ಮತ್ತು ಅರಿಶಿನ ತಿಲಕವನ್ನು ಹಚ್ಚಿಕೊಳ್ಳಬೇಕು.  


ಇದನ್ನೂ ಓದಿ : Akshaya Tritiya 2022 : 50 ವರ್ಷಗಳ ನಂತರ ಅಕ್ಷಯ ತೃತೀಯದ ದಿನ ರೂಪುಗೊಳ್ಳುತ್ತಿದೆ ಅದ್ಬುತ ಯೋಗ, ತಿಳಿಯಿರಿ ಈ ಬಾರಿಯ ಮಹತ್ವ


ಶುಕ್ರ : ರಾಕ್ಷಸ ಗುರು ಶುಕ್ರಾಚಾರ್ಯರ ಫಲಾನುಭವಿಯಾಗಲು ಪ್ರಕಾಶಮಾನವಾದ ಬಿಳಿ ಬಟ್ಟೆಗಳನ್ನು ಧರಿಸಿ. ಅಲ್ಲದೆ, ಜೇಬಿನಲ್ಲಿ ಉತ್ತಮ ಗುಣಮಟ್ಟದ ಪ್ರಕಾಶಮಾನವಾದ ಬಿಳಿ ಕರವಸ್ತ್ರವನ್ನು ಇರಿಸಿ. ಬಿಳಿ ಹೂವುಗಳ ಮಾಲೆಯನ್ನು ಮಾತ್ರ ಧರಿಸಿ. ವಜ್ರ, ಪ್ಲಾಟಿನಂ ಮತ್ತು ವೈಟ್ ಗೋಲ್ಡ್ ಆಭರಣಗಳನ್ನು ಧರಿಸುವುದರಿಂದ ಶುಕ್ರನ ಕರುಣೆ ಸಿಗುತ್ತದೆ. 


ಶನಿ : ಸೂರ್ಯನ ಮಗನಾದ ಶನಿಯನ್ನು ಮೆಚ್ಚಿಸಲು, ವ್ಯಕ್ತಿಯು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.  ಕಪ್ಪು ಬಣ್ಣದ ಕರವಸ್ತ್ರವನ್ನು ಪಾಕೆಟ್‌ನಲ್ಲಿ ಇರಿಸಿ. ಇದರೊಂದಿಗೆ ಕಪ್ಪು ಬಣ್ಣದ ವಸ್ತುಗಳನ್ನು ಸಾಧ್ಯವಾದಷ್ಟು ದಾನ ಮಾಡಬೇಕು. ಬಡವನಿಗೆ ಪಾದರಕ್ಷೆ ದಾನ ಮಾಡಿದರೆ ಒಳ್ಳೆಯದು ಎನ್ನಲಾಗುತ್ತದೆ.  


ರಾಹು: ರಾಹುವನ್ನು  ಮೆಚ್ಚಿಸಲು, ಬೂದುಬಣ್ಣದ ಬಟ್ಟೆಗಳನ್ನು ಧರಿಸಬೇಕು. ಮಾತ್ರವಲ್ಲ, ರಾಹುವನ್ನು ಮೆಚ್ಚಿಸಲು ನಾಯಿಗಳಿಗೆ ಸೇವೆ ಸಲ್ಲಿಸುವುದು ಸಹ ಪರಿಣಾಮಕಾರಿ ಮಾರ್ಗವಾಗಿದೆ. 


ಇದನ್ನೂ ಓದಿ : ದಾರಿಯಲ್ಲಿ ಸಿಗುವ ಹಣ ಶುಭವೋ/ಅಶುಭವೋ?


ಕೇತು : ಬಹು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಕೇತು ಸಂತೋಷವಾಗುತತ್ತಾನೆ. ಜೇಬಿನಲ್ಲಿ ಬಣ್ಣ ಬಣ್ಣದ ದ ಕರವಸ್ತ್ರವನ್ನು ಇಟ್ಟುಕೊಳ್ಳಿ. ಕೈ ಮಣಿಕಟ್ಟಿನಲ್ಲಿ ಕೆಂಪು ಬಣ್ಣದ ದಾರವನ್ನು ಧರಿಸಬೇಕು. ಕೇತು ಧರ್ಮ ಧ್ವಜವಾಗಿರುವುದರಿಂದ ಧಾರ್ಮಿಕ ಚಿಹ್ನೆ ದೇಹದ ಮೇಲೆ ಇರಬೇಕು.


  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.